ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಕುಂಠ ಏಕಾದಶಿ : ವಿಷ್ಣು ನಿವಾಸಕ್ಕಿಂದು ತೆರೆದ ಬಾಗಿಲು!

By Staff
|
Google Oneindia Kannada News

ವೈಕುಂಠ ಏಕಾದಶಿ : ವಿಷ್ಣು ನಿವಾಸಕ್ಕಿಂದು ತೆರೆದ ಬಾಗಿಲು!
ವಿಷ್ಣು ದೇವಾಲಯಗಳ ತುಂಬ ಭಕ್ತ ಸಮೂಹ, ಕೋಟೆ ವೆಂಕಟೇಶ್ವರನಿಗೆ ಚಿನ್ನದ ಕಿರೀಟ

ಬೆಂಗಳೂರು : ರಾಜ್ಯದ ವಿವಿಧೆಡೆ ವೈಕುಂಠ ಏಕಾದಶಿಯನ್ನು ಮಂಗಳವಾರ ಬೆಳಗ್ಗೆಯಿಂದಲೇ, ಭಕ್ತಿ ಶ್ರದ್ಧೆಗಳಿಂದ ಜನರು ಆಚರಿಸುತ್ತಿದ್ದಾರೆ.

ಇದೊಂದು ಪವಿತ್ರ ದಿನವಾಗಿದ್ದು, ಇಂದು ವೈಕುಂಠದ ಬಾಗಿಲು ತೆರೆದಿಡುತ್ತದೆ. ಇಂದು ಮೃತಪಟ್ಟವರು ನೇರವಾಗಿ ವೈಕುಂಠ ಸೇರುತ್ತಾರೆ ಎಂಬ ನಂಬಿಕೆ ಹಿಂದೂಗಳಲ್ಲಿದೆ.

ಸಮುದ್ರ ಮಂಥನದಿಂದ ಪಡೆದ ಅಮೃತವನ್ನು ದೇವತೆಗಳು ಸೇವಿಸಿದ ಪುಣ್ಯ ದಿನ -ವೈಕುಂಠ ಏಕಾದಶಿ. ಭೀಷ್ಮ, ಈ ಪವಿತ್ರ ದಿನವೇ ಸಾವನ್ನು ಕೋರಿದ ಎನ್ನುತ್ತದೆ ಮಹಾಭಾರತ.

ಕೋಲಾರದಲ್ಲಿನ ಚಿಕ್ಕತಿರುಪತಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ರಾಜಧಾನಿ ನಗರದ ಓಟಿಸಿ ರಸ್ತೆ, ಬಳೆಪೇಟೆಯಲ್ಲಿನ ವೆಂಕಟರಮಣ ದೇವಸ್ಥಾನ, ಚಾಮರಾಜಪೇಟೆಯ ಕೋಟೆ ವೆಂಕಟೇಶ್ವರ ಮತ್ತು ಶ್ರೀನಗರದ ವೆಂಕಟರಮಣ ದೇವಸ್ಥಾನ, ವೈಯಾಲಿಕಾವಲ್‌ನ ತಿರುಪತಿ ತಿರುಮಲ ದೇವಸ್ಥಾನ, ಶಿವಾಜಿನಗರದ ಶ್ರೀರಾಮ ದೇವಸ್ಥಾನಗಳು ಭಕ್ತರಿಂದ ತುಂಬಿ ತುಳುಕುತ್ತಿವೆ.

ಕಿರೀಟ ಸಮರ್ಪಣೆ : ಅವಿನ್ಯೂ ರಸ್ತೆಯ ದವನಂ ಜ್ಯುವೆಲರ್ಸ್‌ ತನ್ನ ಶತಮಾನೋತ್ಸವದ ಹಿನ್ನೆಲೆಯಲ್ಲಿ, ಕೋಟೆ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಗೆ ಚಿನ್ನ ಮತ್ತು ವಜ್ರದ ಕಿರೀಟವನ್ನು ಮಂಗಳವಾರ ಅರ್ಪಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X