ಕಾಂಗ್ರೆಸ್ನಲ್ಲಿ ಭಿನ್ನಮತ : ಧರಂ ಪದಚ್ಯುತಿಗೆ ಮುಹೂರ್ತ?
ಕಾಂಗ್ರೆಸ್ನಲ್ಲಿ
ಭಿನ್ನಮತ
:
ಧರಂ
ಪದಚ್ಯುತಿಗೆ
ಮುಹೂರ್ತ?
ಖರ್ಗೆ-ಕೃಷ್ಣ,
ಕುಮಾರಸ್ವಾಮಿ-ಧರಂ
ಮಾತುಕತೆ,
ಮುಗಿಯುವುದೇ
ಸರ್ಕಾರದ
ಕತೆ?
ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಅದೇ ಉತ್ಸಾಹದಲ್ಲಿ ವಿಧಾನಸಭಾ ಚುನಾವಣೆಗಳನ್ನು ಎದುರಿಸಲು ಕಾಂಗ್ರೆಸ್ನ ಒಂದು ಬಣ ಆಸಕ್ತಿವಹಿಸಿದೆ.
ಚುನಾವಣೆಗೆ ಹೈಮಾಂಡ್ ಮನವೊಲಿಸಲು ಈ ಬಣ ಯತ್ನಿಸಿದೆ. ಜೊತೆಗೆ ಧರ್ಮಸಿಂಗ್ ಸ್ಥಾನಕ್ಕೆ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ತರುವ ಯತ್ನವೂ ನಡೆದಿದೆ.
ಕಾಂಗ್ರೆಸ್ನಲ್ಲಿರುವ ಜೆಡಿಎಸ್ ವಿರೋಧಿ ಬಣ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಮಾತುಕತೆ ಆರಂಭಿಸಿದೆ. ಖರ್ಗೆ ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಳೆದೆರಡು ದಿನಗಳಿಂದ ಈ ಕುರಿತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ ಚುನಾವಣೆಗೆ ನಾವೂ ಸಿದ್ಧ ಎಂದು ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಮತ್ತು ಜೆಡಿಎಸ್ ಕಾರ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ಅಂತಿಮವಾಗಿ, ರಾಜ್ಯ ಸರ್ಕಾರದ ಭವಿಷ್ಯ ಸೋನಿಯಾ ನಿರ್ಧಾರದ ಮೇಲೆ ನಿಂತಿದೆ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ