‘ಸರಣಿ ಶೋಯೆಬ್ ಕೇಂದ್ರಿತವಾದರೆ, ಗೆಲುವು ಭಾರತಕ್ಕೆ’
‘ಸರಣಿ
ಶೋಯೆಬ್
ಕೇಂದ್ರಿತವಾದರೆ,
ಗೆಲುವು
ಭಾರತಕ್ಕೆ’
ನಮ್ಮ
ತಂಡ
ಸಮತೋಲಿತ
:
ರಾಹುಲ್
ದ್ರಾವಿಡ್
ಹೇಳಿಕೆ...
ಸೋಮವಾರ ಅವರು ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಮುಂಬರುವ ಸರಣಿಯಲ್ಲಿ ಪಾಕಿಸ್ತಾನ ಕೇವಲ ಶೋಯೆಬ್ ಅಖ್ತರ್ ದಾಳಿಯನ್ನೇ ನೆಚ್ಚಿಕೊಂಡು, ಭಾರತದ ಒಂದಿಬ್ಬರು ಬ್ಯಾಟುಗಾರರನ್ನು ಗುರಿಯಾಗಿರಿಸಿಕೊಂಡರೆ, ಅದು ಆತಿಥೇಯರಿಗೆ ಪಾಲಿಗೆ ಮುಳುವಾಗಲಿದೆ ಎಂದು ಹೇಳಿದರು.
ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ನನ್ನ ಬೌಲಿಂಗಿಗೆ ಹೆದರುತ್ತಾರೆ ಎಂದು ಪಾಕ್ ವೇಗದ ಬೌಲರ್ ಶೋಯೆಬ್ ಅಖ್ತರ್ ಟೀವಿಯಾಂದರಲ್ಲಿ ಹೇಳಿಕೆ ನೀಡಿದ್ದಾರೆಂದು ವರದಿಯಾಗಿದೆ. ಅಲ್ಲದೆ ಶೋಯಬ್ ಸರಣಿಯ ಮುಖ್ಯ ಅಂಶ ಎಂಬ ಮಾತು ಪಾಕ್ನಿಂದ ಕೇಳಿಬರುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ವರದಿಗಾರರು ಕೇಳಿದಾಗ, ನಾವು ಏಕವ್ಯಕ್ತಿಯನ್ನು ಕೇಂದ್ರೀಕರಿಸುವುದಿಲ್ಲ. ಅದು ಅಪಾಯಕಾರಿ. ಹಾಗಾಗಿ ನಮ್ಮ ಗಮನವೇನಿದ್ದರೂ ಇಡೀ ತಂಡದತ್ತ ಎಂದರು.
ಒಬ್ಬಿಬ್ಬರು ಆಟಗಾರನನ್ನೇ ಮುಖ್ಯಎಂದು ಪರಿಗಣಿಸಿದರೆ ನಷ್ಟ ತಪ್ಪಿದ್ದಲ್ಲ. ಒಂದು ವೇಳೆ ಪಾಕ್ ಇಂತಹ ಪ್ರಯೋಗಕ್ಕಿಳಿದರೆ, ಅದು ಅವರಿಗೇ ಮುಳುವಾಗಲಿದೆ. ಸದ್ಯಕ್ಕಂತೂ ನಮ್ಮ ತಂಡದ ಎಲ್ಲ ಆಟಗಾರರೂ ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಇದು ಹಿಂದಿನ ಕೇಲವು ಸರಣಿಗಳಿಂದ ಸಾಬೀತಾಗಿದೆ ಎಂದು ವಿವರಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು