ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಕ್ರಿಯ ರಾಜಕಾರಣಕ್ಕೆ ಅಟಲ್‌ ಬಿಹಾರಿ ವಾಜಪೇಯಿ ಬೈಬೈ?

By Staff
|
Google Oneindia Kannada News

ಸಕ್ರಿಯ ರಾಜಕಾರಣಕ್ಕೆ ಅಟಲ್‌ ಬಿಹಾರಿ ವಾಜಪೇಯಿ ಬೈಬೈ?
ಬಿಜೆಪಿ ರಜತ ಮಹೋತ್ಸವದ ತುಂಬಾ ಅಸ್ಪಷ್ಟತೆ, ಗೊಂದಲ... ಸಂಭ್ರಮದ ಜಾಗದಲ್ಲಿ ಸಂಕಷ್ಟಗಳು

ಮುಂಬಯಿ : ಭವಿಷ್ಯದ ಯಾವುದೇ ಚುನಾವಣೆಗಳಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಘೋಷಿಸಿದ್ದಾರೆ.

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ರಜತ ಮಹೋತ್ಸವ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ರಾಜಕೀಯ ನಿವೃತ್ತಿ ಪಡೆಯುವುದಾಗಿ ಮನದಿಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಇನ್ನುಮುಂದೆ ರಾಮನಾಗಿ ಆಡ್ವಾಣಿ, ಲಕ್ಷ್ಮಣನಾಗಿ ಪ್ರಮೋದ್‌ ಮಹಾಜನ್‌ ಭಾರತೀಯ ಜನತಾಪಕ್ಷವನ್ನು ಮುನ್ನಡೆಸುವರು ಎಂದು ವಾಜಪೇಯಿ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಭವಿಷ್ಯ? : ಸಂಸದರ ಭ್ರಷ್ಟಾಚಾರ, ಲೈಂಗಿಕ ಹಗರಣ, ಪಕ್ಷದೊಳಗಿನ ಭಿನ್ನಮತ, ಉಮಾ ಪ್ರಕರಣ, ಆರೆಸ್ಸೆಸ್‌ ಜೊತೆಗಿನ ವೈಮನಸ್ಸು -ಹೀಗೆ ಅನೇಕ ಸಂಗತಿಗಳು ಬಿಜೆಪಿಯ ರಜತ ಮಹೋತ್ಸವದ ಸಂಭ್ರಮವನ್ನು ಕಸಿದಿವೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ರಾಜಕಾರಣದಿಂದ ದೂರವುಳಿಯುವುದಾಗಿ ವಾಜಪೇಯಿ ಘೋಷಿಸಿದ್ದಾರೆ.

ಆಡ್ವಾಣಿ ರಾಜೀನಾಮೆಯ ನಂತರ ಮುಂದಿನ ಕೆಲವೇ ದಿನಗಳಲ್ಲಿ, ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಲಿರುವ ರಾಜ್‌ನಾಥ್‌ ಸಿಂಗ್‌ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸುವರು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X