ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ಆರ್ಭಟ : ಮುಖ್ಯಮಂತ್ರಿ ನೇತೃತ್ವದಲ್ಲಿ ತುರ್ತು ಸಭೆ

By Staff
|
Google Oneindia Kannada News

ಉಗ್ರರ ಆರ್ಭಟ : ಮುಖ್ಯಮಂತ್ರಿ ನೇತೃತ್ವದಲ್ಲಿ ತುರ್ತು ಸಭೆ
ಉಗ್ರರ ಆರ್ಭಟ : ಮುಖ್ಯಮಂತ್ರಿ ನೇತೃತ್ವದಲ್ಲಿ ತುರ್ತು ಸಭೆ

ಬೆಂಗಳೂರು : ಉಗ್ರರ ಗುಂಡಿಗೆ ವಿಜ್ಞಾನಿಯಾಬ್ಬರು ಬಲಿಯಾದ ಹಿನ್ನೆಲೆಯಲ್ಲಿ, ಸರ್ಕಾರ ಉನ್ನತ ಮಟ್ಟದ ಸಭೆಯನ್ನು ಗುರುವಾರ ನಡೆಸಲಿದೆ.

ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಯಲ್ಲಿ, ಗೃಹ ಇಲಾಖೆಯ ಅಧಿಕಾರಿಗಳು ಮತ್ತು ಹಿರಿಯ ಪೊಲೀಸ್‌ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ನಗರದ ಭದ್ರತೆ ಬಗೆಗೆ ಈ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ.

ನಗರಕ್ಕೆ ಬಂದ ಉಗ್ರರು : ಹಸಿರು ನಗರ ಬೆಂಗಳೂರಿನಲ್ಲೂ ಕೆಂಪು(ರಕ್ತ) ಚೆಲ್ಲಾಡಿದೆ! ಬುಧವಾರ ರಾತ್ರಿ ನಡೆದ ಘಟನೆಯಿಂದ ರಾಜ್ಯದಲ್ಲಿ ಆತಂಕದ ವಾತಾವರಣ ಕಂಡು ಬಂದಿದೆ.

ಬುಧವಾರ ಸಂಜೆ 7.10ರ ಸುಮಾರಿನಲ್ಲಿ , ನಗರದ ಭಾರತೀಯ ವಿಜ್ಞಾನ ಮಂದಿರದ ಜೆ.ಎನ್‌.ಟಾಟಾ ಸಭಾಂಗಣಕ್ಕೆ ನುಗ್ಗಿದ ಉಗ್ರರು, ಎ.ಕೆ.47ರೈಫಲ್‌ನಿಂದ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ನವದೆಹಲಿಯ ಐಐಟಿ ವಿಜ್ಞಾನಿ ಪ್ರೊ.ಎಂ.ಸಿ.ಪುರಿ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಲಷ್ಕರ್‌-ಇ-ತೊಯ್ಬಾ ಕೈವಾಡವಿದೆ ಎನ್ನಲಾಗಿದೆ.

ಐಜಿಟಿ ಸಭಾಂಗಣದಲ್ಲಿ ಕೈ ಬಾಂಬ್‌ ಸ್ಪೋಟಿಸುವ ಉಗ್ರರ ಯತ್ನ ವಿಫಲವಾದ ಹಿನ್ನೆಲೆಯಲ್ಲಿ , ಹೆಚ್ಚಿನ ಅನಾಹುತ ತಪ್ಪಿದೆ.

ಇಬ್ಬರ ಬಂಧನ : ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಲಸೂರಿನಲ್ಲಿ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X