ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಕೆಲವೆಡೆ ಇಂದು ಮರುಮತದಾನ, ಮರುಎಣಿಕೆ

By Staff
|
Google Oneindia Kannada News

ರಾಜ್ಯದ ಕೆಲವೆಡೆ ಇಂದು ಮರುಮತದಾನ, ಮರುಎಣಿಕೆ
ತಾ.ಪಂ ಮತ್ತು ಜಿ.ಪಂ.ಗೆ ತಿಂಗಳೊಳಗೆ ಹೊಸ ಅಧ್ಯಕ್ಷರು, ಮೀಸಲಾತಿ ಪಟ್ಟಿ ಪ್ರಕಟ

ಬೆಂಗಳೂರು : ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ, ಹೊಸ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

ಇಪ್ಪತ್ತು ತಿಂಗಳ ಅಧಿಕಾರವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದೆ. ಚುನಾವಣೆಯ ಒಂದು ಹಂತ ಮುಕ್ತಾಯಗೊಂಡಿದ್ದು, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಇನ್ಮುಂದೆ ಕಸರತ್ತು ನಡೆಯಲಿದೆ.

ಅಪೂರ್ಣ ಫಲಿತಾಂಶ : ಆರು ಜಿಲ್ಲಾ ಪಂಚಾಯತ್‌ ಮತ್ತು 26 ತಾಲೂಕು ಪಂಚಾಯತ್‌ ಸ್ಥಾನಗಳ ಫಲಿತಾಂಶವನ್ನು ಚುನಾವಣಾ ಆಯೋಗ ಇನ್ನೂ ಪ್ರಕಟಿಸಿಲ್ಲ.

ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಏಳು ತಾ.ಪಂ.ಸ್ಥಾನಗಳಿಗೆ ಬುಧವಾರ ಮತದಾನ ನಡೆದಿದೆ. ಅದರ ಮತಎಣಿಕೆ ಗುರುವಾರ ನಡೆಯಲಿದೆ.

ಮುಳಬಾಗಲು ತಾಲೂಕಿನ ಉತ್ತನೂರು, ಮಾಗಡಿ ತಾಲೂಕಿನ ಸೊಲೂರು, ರಾಯಚೂರಿನ ಮಾನ್ವಿಯಲ್ಲಿ ಮರು ಮತದಾನ ಗುರುವಾರ ನಡೆಯಲಿದೆ.

ಬಳ್ಳಾರಿಯ ಇಟಗಿ, ದಾವಣಗೆರೆಯ ತೆಲಗಿಯಲ್ಲಿ ಜನವರಿ ಹದಿನೈದರಂದು ಚುನಾವಣೆ ನಡೆಯಲಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X