ಐಟಿ ಕಂಪನಿಗಳಲ್ಲಿ ತಲ್ಲಣ, ಉಗ್ರರ ಮದ್ದು ಗುಂಡು ವಶ
ಐಟಿ
ಕಂಪನಿಗಳಲ್ಲಿ
ತಲ್ಲಣ,
ಉಗ್ರರ
ಮದ್ದು
ಗುಂಡು
ವಶ
ಉಗ್ರರು
ಈ
ಕುಕೃತ್ಯಕ್ಕೆ
ವಾಹನ
ಬಳಸಿಲ್ಲ
-ನಾರಾಯಣ
ಗೌಡ
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡುತ್ತಿದ್ದ ಅವರು, ಮಾಹಿತಿ ತಂತ್ರಜ್ಞಾನದ ಪ್ರಮುಖ ನಗರವಾದ ಬೆಂಗಳೂರು ಮೇಲೆ ಉಗ್ರರ ಕಣ್ಣು ಬಿದ್ದಿದೆ. ಈ ದಾಳಿಗಳ ಮೂಲಕ ವಿಶ್ವದ ಗಮನ ಸೆಳೆಯಲು ಉಗ್ರರು ಪ್ರಯತ್ನಸಿದ್ದಾರೆ ಎಂದರು.
ಬುಧವಾರ ನಡೆದ ಉಗ್ರರ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ನಾಯರ್, ಪ್ರಸ್ತುತ ಜಗತ್ತಿನಲ್ಲಿನ ಯಾವ ವ್ಯಕ್ತಿಯೂ ಸುರಕ್ಷಿತವಾಗಿಲ್ಲ ಎಂದಿದ್ದಾರೆ.
ಐಟಿ-ಬಿಟಿ ರಂಗದಲ್ಲಿ ತಲ್ಲಣ : ಸುರಕ್ಷತೆಯ ದೃಷ್ಟಿಯಿಂದ ಬೆಂಗಳೂರನ್ನು ಕಾರ್ಯಕ್ಷೇತ್ರವಾಗಿಸಿಕೊಂಡಿದ್ದ ಐಟಿ-ಬಿಟಿ ಕಂಪನಿಗಳು ಈಗ ತಲ್ಲಣಗೊಂಡಿವೆ. ಅಮಾಯಕರನ್ನು ಬಲಿಪಶು ಮಾಡುವ ಉಗ್ರರ ಯತ್ನವನ್ನು ಅವು ಖಂಡಿಸಿವೆ.
ಮದ್ದು-ಗುಂಡು ವಶ : ವಿಜ್ಞಾನಿ ಎಂ.ಸಿ.ಪುರಿ ಹತ್ಯೆಯ ಬಗ್ಗೆ ಪೊಲೀಸರು ವ್ಯಾಪಕ ತನಿಖೆ ಆರಂಭಿಸಿದ್ದು, ಈ ಸಂಬಂಧ ಗುರುವಾರ ಬೆಳಗ್ಗೆ, ಎರಡು ಗ್ರೆನೇಡುಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಎ.ಕೆ.47 ರೈಫಲ್, 11 ಸ್ಪೋಟಕ ವಸ್ತುಗಳು ಮತ್ತು ಆರು ಮ್ಯಾಗಜಿನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ನಾರಾಯಣ ಗೌಡ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಉಗ್ರರು ಭಾರತೀಯ ವಿಜ್ಞಾನ ಸಂಸ್ಥೆಗೆ ವಾಹನದಲ್ಲಿ ಬಂದಿದ್ದರು ಎಂಬ ಅಂಶವನ್ನು ಅವರು ತಳ್ಳಿ ಹಾಕಿದ್ದಾರೆ. ಉಗ್ರರು ಕುಕೃತ್ಯದ ನಂತರ ಗೋಡೆ ಹಾರಿ ತಪ್ಪಿಸಿಕೊಂಡಿದ್ದಾರೆ ಎಂದು ನಾರಾಯಣಗೌಡ ಅಭಿಪ್ರಾಯಪಟ್ಟಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು