ರವೀಂದ್ರಕಲಾಕ್ಷೇತ್ರದಲ್ಲಿ ನಾಲ್ಕುದಿನ ಚಿಣ್ಣರ ಕಲರವ
ರವೀಂದ್ರಕಲಾಕ್ಷೇತ್ರದಲ್ಲಿ
ನಾಲ್ಕುದಿನ
ಚಿಣ್ಣರ
ಕಲರವ
ಅಖಿಲ
ಕರ್ನಾಟಕ
ಮಕ್ಕಳ
ಸಾಹಿತ್ಯ
ಸಮ್ಮೇಳನ,
ವೆಂಕಟಸುಬ್ಬಯ್ಯ
ಅಧ್ಯಕ್ಷತೆ
ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯಇಂಜಿನೀಯರಿಂಗ್ ಪ್ರತಿಷ್ಠಾನದ ಆಶ್ರಯದಲ್ಲಿ, ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ರಮೇಶ್ ಸುರ್ವೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಮ್ಮೇಳನವು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದ್ದು, ನಾಡೋಜ ಪ್ರಶಸ್ತಿ ಪುರಸ್ಕೃತ ಪ್ರೊ.ಜಿ.ವೆಂಕಟಸುಬ್ಬಯ್ಯ ಅಧ್ಯಕ್ಷತೆ ವಹಿಸುವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ರಾಮಲಿಂಗಾರೆಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ, ಮೇಯರ್ ಮುಮ್ತಾಜ್ ಬೇಗಂ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.
ಸಮ್ಮೇಳನಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಒಟ್ಟು 200 ಮಕ್ಕಳು ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಮಕ್ಕಳೇ ಬರೆದು ಪ್ರಕಟಿಸಿದ 27ಪುಸ್ತಕಗಳಿಗೆ ನಗದು ಬಹುಮಾನ ಹಾಗೂ ವಿಶ್ವೇಶ್ವರಯ್ಯಪ್ರಶಸ್ತಿ ನೀಡಲಾಗುವುದು.
ಸಮ್ಮೇಳನದಲ್ಲಿ ಮಕ್ಕಳ ನಾಟಕ, ಯಕ್ಷಗಾನ, ನೃತ್ಯೋತ್ಸವ, ಗಾಯನ, ವಿಚಾರ ಸಂಕಿರಣ ಮತ್ತು ಕವಿಗೋಷ್ಠಿಗಳು ನಡೆಯಲಿವೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು