ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುನಾಮಿಯಲ್ಲಿ ಮಡಿದವರಿಗೆ ಮೀನುಗಾರರ ಶ್ರದ್ಧಾಂಜಲಿ

By Staff
|
Google Oneindia Kannada News

ಸುನಾಮಿಯಲ್ಲಿ ಮಡಿದವರಿಗೆ ಮೀನುಗಾರರ ಶ್ರದ್ಧಾಂಜಲಿ
ದೋಣಿಗಳಿಗೆ ಕಪ್ಪು ಬಟ್ಟೆ ಕಟ್ಟಿ ಶೋಕಾಚರಣೆ, ದೀಪ ಬೆಳಗಿ ಮೌನಾಚರಣೆ

ಚೆನ್ನೈ : ಕಳೆದ ವರ್ಷ ಡಿಸೆಂಬರ್‌ 26ರಂದು ಸಂಭವಿಸಿದ ಸುನಾಮಿ ದುರಂತದಲ್ಲಿ ಬಲಿಯಾದವರ ಆತ್ಮಕ್ಕೆ ಶಾಂತಿ ಕೋರಿ, ಮರೀನಾ ಬೀಚ್‌ ಮೀನುಗಾರರು ಸೋಮವಾರ ಪ್ರಾರ್ಥನೆ ಸಲ್ಲಿಸಿದರು.

ಶ್ರೀನಿವಾಸಪುರಂ ಕಾಲನಿಯ ಮೀನುಗಾರರು, ಸುನಾಮಿ ದುರಂತದಲ್ಲಿ 270ಕ್ಕೂ ಹೆಚ್ಚು ಜನ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ.

ತಂಬಿದ ಕಂಬನಿಗಳಿಂದ ಮರೀನಾ ಕಡಲ ತೀರಕ್ಕೆ ಆಗಮಿಸಿದ ಮೀನುಗಾರರ ಅಳಿದುಳಿದ ಕುಟುಂಬ ವರ್ಗ , ಅಗಲಿದ ಜೀವಗಳನ್ನೆಲ್ಲ ನೆನೆದು ಮೇಣದ ದೀಪ ಹಚ್ಚಿ, ಮೌನ ಆಚರಿಸಿದರು. ಅಲ್ಲದೆ ದುರಂತದ ಕಹಿನೆನಪಿಗೆ, ತಮ್ಮ ದೋಣಿಗಳಿಗೆ ಕಪ್ಪು ಬಟ್ಟೆಯ ತುಂಡುಗಳನ್ನು ಕಟ್ಟಿದರು.

ಕಡಲ ತೀರಕ್ಕೆ ವಾಯುವಿಹಾರ ಮಾಡಲು ಬಂದಿದ್ದವರೆಲ್ಲರೂ ಸಹ ಈ ಕಾರ್ಯದಲ್ಲಿ ಪಾಲ್ಗೊಂಡು, ಕೆಲ ನಿಮಿಷಗಳ ಕಾಲ ಮೌನ ಆಚರಿಸಿದರು.

ಸುನಾಮಿ ದುರಂತದಲ್ಲಿ ಕಳೆದ ವರ್ಷ ಮೂರು ಲಕ್ಷ ಮಂದಿ ಮೃತಪಟ್ಟಿದ್ದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X