ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮಣ್ಣನಿಗೆ ಈಗ ಎಪ್ಪತ್ತಣ್ಣ : ಹುಟ್ಟು ಹಬ್ಬ ಬೇಡವಂತಣ್ಣ!

By Staff
|
Google Oneindia Kannada News

ಧರ್ಮಣ್ಣನಿಗೆ ಈಗ ಎಪ್ಪತ್ತಣ್ಣ : ಹುಟ್ಟು ಹಬ್ಬ ಬೇಡವಂತಣ್ಣ!
ತಿರುಪತಿಗೆ ತೆರಳಿ ವೆಂಕಟೇಶ್ವರನಿಗೆ ವಿಶೇಷ ಪೂಜೆ-ಪ್ರಾರ್ಥನೆ

ಬೆಂಗಳೂರು : ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಸದ್ದುಗದ್ದಲವಿಲ್ಲದೆ ಅನುಭವಿಸಲು, ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಅವರು ನಿರ್ಧರಿಸಿದ್ದಾರೆ.

ಭಾನುವಾರ 70ನೇ ವಸಂತಕ್ಕೆ ಕಾಲಿಡುತ್ತಿರುವ ಧರ್ಮಸಿಂಗ್‌, ತಿರುಪತಿಗೆ ತೆರಳಿ ಶ್ರೀವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಕರ್ನಾಟಕ ಸೇರಿದಂತೆ ರಾಷ್ಟ್ರದೆಲ್ಲೆಡೆ ನೈಸರ್ಗಿಕ ವಿಕೋಪಗಳು ಮನುಕುಲವನ್ನು ಕಾಡಿವೆ. ಈ ಹಿನ್ನೆಲೆಯಲ್ಲಿ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಧರ್ಮಸಿಂಗ್‌ ಆಚರಿಸಿಕೊಳ್ಳಲು ಮುಂದಾಗಿದ್ದಾರೆ. ಹಾರ-ತುರಾಯಿಗಳನ್ನು ಸ್ವೀಕರಿಸದಿರಲು ಅವರು ನಿಶ್ಚಯಿಸಿದ್ದಾರೆ.

ಕೊಸರು : ಧರ್ಮಸಿಂಗ್‌ ಪುತ್ರನ ಅದ್ಧೂರಿ ವಿವಾಹವನ್ನು ಜನ ಇನ್ನೂ ಮರೆತಿಲ್ಲ. ಆಗಲೂ ರಾಜ್ಯದಲ್ಲಿ ಸಂಕಷ್ಟವಿತ್ತು. ನೈಸರ್ಗಿಕ ವಿಕೋಪಗಳಿಂದ ಜನ ಕಂಗೆಟ್ಟಿದ್ದರು. ಆದರೆ ದೊರೆ ಮಗನ ಮದುವೆ ಮಾತ್ರ ಸೊಗಸಾಗಿತ್ತು. ಪಾಪ, ಧರಂಗೆ ತಡವಾಗಿಯಾದರೂ ಜ್ಞಾನೋದಯವಾಗಿದೆ!

(ಇನ್ಫೋ ವಾರ್ತೆ)

ಇದು ‘ಧರ್ಮ’ ವಿವಾಹ :
ಧರ್ಮಸಿಂಗ್‌ ಮಗನ ಮದುವೆಗೆ ಸಜ್ಜಾದ ಗುಲ್ಬರ್ಗ
ಅಬ್ಬಬ್ಬಾ! ಎನ್ನುವಂತಿತ್ತು ‘ಧರ್ಮ’ ಪುತ್ರನ ವಿವಾಹ
ಧರ್ಮಸಿಂಗ್‌ ಪುತ್ರನ ಆರತಕ್ಷತೆಯಲ್ಲಿ ಗಣ್ಯರ ದಂಡು

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X