ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಕಲ್ಯಾಣಕ್ಕೆ ಕೇಂದ್ರ ಇನ್ನಷ್ಟು ಹಣ ನೀಡಲಿ -ಧರಂ

By Staff
|
Google Oneindia Kannada News

ಕರ್ನಾಟಕ ಕಲ್ಯಾಣಕ್ಕೆ ಕೇಂದ್ರ ಇನ್ನಷ್ಟು ಹಣ ನೀಡಲಿ -ಧರಂ
ಕೇಂದ್ರದ ಯೋಜನಾ ಅನುದಾನ ಸಾಲದು, 15 ಸಾವಿರ ಕೋಟಿ ನೀಡಬೇಕೆಂದು ಆಯೋಗಕ್ಕೆ ಮನವಿ.

ಗುಲ್ಬರ್ಗ : ರಾಜ್ಯಕ್ಕೆ ನೀಡುತ್ತಿರುವ ಯೋಜನಾ ಗಾತ್ರವನ್ನು ಹೆಚ್ಚಿಸುವಂತೆ, ಕೇಂದ್ರ ಯೋಜನಾ ಆಯೋಗವನ್ನು ಒತ್ತಾಯಿಸಲಾಗುವುದು ಎಂದು ಮುಖ್ಯಮಂತ್ರಿ ಧರ್ಮಸಿಂಗ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಹಣಕಾಸು ಸಚಿವ ಪಿ.ಜಿ.ಆರ್‌.ಸಿಂಧ್ಯಾ ಜನವರಿಯಲ್ಲಿ ದೆಹಲಿಗೆ ತೆರಳಲಿದ್ದಾರೆ. ಆ ಸಂದರ್ಭದಲ್ಲಿ ಸಿಂಧ್ಯಾ, ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್‌ಸಿಂಗ್‌ ಅಹ್ಲೂವಾಲಿಯಾ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದರು.

ಅಲ್ಲದೇ ಈ ಬಗೆಗೆ ಪ್ರಧಾನ ಮಂತ್ರಿ ಮನಮೋಹನ್‌ಸಿಂಗ್‌ ಅವರನ್ನು ಭೇಟಿಮಾಡಿ, ರಾಜ್ಯಕ್ಕೆ ಹೆಚ್ಚು ಹಣ ಮೀಸಲಿಡುವಂತೆ ನಾನೂ ಕೋರುತ್ತೇನೆ ಎಂದು ತಿಳಿಸಿದರು.

ಪ್ರಸ್ತುತ ವರ್ಷ ರಾಜ್ಯಕ್ಕೆ 13 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಇನ್ನೂ ಎರಡು ಸಾವಿರ ಕೋಟಿ ರೂ.ಗಳಿಗೆ ಒತ್ತಾಯಿಸುವುದಾಗಿ ಹೇಳಿದರು.

(ಪಿಟಿಐ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X