ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಹ ಪರಿಹಾರ ಕೇಂದ್ರದಲ್ಲಿ ಕಾಲ್ತುಳಿತ : 41 ಜನರ ಸಾವು

By Staff
|
Google Oneindia Kannada News

ಪ್ರವಾಹ ಪರಿಹಾರ ಕೇಂದ್ರದಲ್ಲಿ ಕಾಲ್ತುಳಿತ : 41 ಜನರ ಸಾವು
ನಗರದಲ್ಲಿ ಎರಡನೇ ಬಾರಿಗೆ ಕಾಲ್ತುಳಿತ, ಗಾಯಾಳುಗಳು ಆಸ್ಪತ್ರೆಗೆ...

ಚೆನ್ನೈ : ಪ್ರವಾಹ ಪರಿಹಾರ ಕೇಂದ್ರವೊಂದರಲ್ಲಿ ಕಾಲ್ತುಳಿತಕ್ಕೆ ಸಿಲುಕಿ 41ಮಂದಿ ಸಾವನ್ನೊಪ್ಪಿದ್ದು, 50 ಜನರು ಗಾಯಗೊಂಡ ಘಟನೆ ರವಿವಾರ ಬೆಳಗ್ಗೆ ಸಂಭವಿಸಿದೆ.

ಬೆಳಗ್ಗೆ 7.30ಕ್ಕೆ ಸುಮಾರು ಪರಿಹಾರ ಸಾಮಗ್ರಿಗಳನ್ನು ವಿತರಿಸುತ್ತಿದ್ದ ಸಂದರ್ಭದಲ್ಲಿ , ಸುಮಾರು 2000ಕ್ಕೂ ಹೆಚ್ಚು ಜನ ನುಗ್ಗಿ ಬಂದಾಗ, ಕಾಲ್ತುಳಿತ ಉಂಟಾಗಿ ಈ ದುರ್ಘಟನೆ ಸಂಭವಿಸಿದೆ. ಸತ್ತವರಲ್ಲಿ 15 ಮಂದಿ ಮಹಿಳೆಯರಾಗಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನಗರದಲ್ಲಿ ಸಂಭವಿಸುತ್ತಿರುವ ಈ ತರಹದ ಎರಡನೇ ಘಟನೆ ಇದಾಗಿದ್ದು, ನವೆಂಬರ್‌ 6ರಂದು ಉತ್ತರ ಚೆನ್ನೈಯಲ್ಲಿ ಇಂತಹದೇ ಘಟನೆ ಸಂಭವಿಸಿ 6ಜನ ಮೃತಪಟ್ಟಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X