ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಗೂಲಿ(ಳಿ) ಕೈಬಿಟ್ಟಿದ್ದು ತಪ್ಪು ತಪ್ಪು ತಪ್ಪು -ಎರ್ರಾಪಳ್ಳಿ ಪ್ರಸನ್ನ

By Staff
|
Google Oneindia Kannada News

ಗಂಗೂಲಿ(ಳಿ) ಕೈಬಿಟ್ಟಿದ್ದು ತಪ್ಪು ತಪ್ಪು ತಪ್ಪು -ಎರ್ರಾಪಳ್ಳಿ ಪ್ರಸನ್ನ
ಕ್ರಿಕೆಟ್‌ ಮಂಡಳಿ ಗಂಗೂಲಿಯನ್ನು ನಡೆಸಿಕೊಂಡ ರೀತಿ ಅನುಚಿತ-ಹಿರಿಯ ಕ್ರಿಕೆಟರುಗಳ ಆಕ್ರೋಶ...

ಕೋಲ್ಕತಾ : ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಮೂರನೇ ಕ್ರಿಕೆಟ್‌ ಟೆಸ್ಟ್‌ಗೆ ಗಂಗೂಲಿ ಕೈಬಿಟ್ಟಿದ್ದು, ಅತಾರ್ಕಿಕ ಹಾಗೂ ವಿಷಾದಕರ ಎಂದು ಭಾರತದ ಮಾಜಿ ಆಫ್‌ ಸ್ಪಿನ್ನರ್‌ ಎರ್ರಾಪಳ್ಳಿ ಪ್ರಸನ್ನ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ದೆಹಲಿ ಪಂದ್ಯದಲ್ಲಿ ಗಂಗೂಲಿ ಉತ್ತಮವಾಗಿಯೇ ಆಡಿದ್ದಾರೆ. ಅಲ್ಲದೆ ಭಾರತ ತಂಡ ಪಂದ್ಯವನ್ನೂ ಗೆದ್ದಿದೆ. ಇಂತಹ ಸಂದರ್ಭದಲ್ಲಿ ಗಂಗೂಲಿ ಅವರನ್ನು ತಂಡದಿಂದ ಕೈಬಿಟ್ಟಿದ್ದು ಆಶ್ಚರ್ಯ ತಂದಿದೆ. ಭಾರತೀಯ ಕ್ರಿಕೆಟ್‌ಗೆ ಅನುಪಮ ಕೊಡುಗೆ ನೀಡಿರುವ ಅವರನ್ನು ನಡೆಸಿಕೊಂಡ ರೀತಿ ಮಾತ್ರ ಕ್ಷುದ್ರವಾದುದು ಎಂದರು.

ಈ ಕುರಿತು ಭಾರತದ ಮಾಜಿ ಆಟಗಾರ ಕೀರ್ತಿ ಆಜಾದ್‌ ಪ್ರತಿಕ್ರಿಯಿಸಿದ್ದು, ಗಂಗೂಲಿ ದೆಹಲಿ ಟೆಸ್ಟ್‌ನಲ್ಲಿ ಉತ್ತಮ ಜೊತೆಯಾಟಗಳಲ್ಲಿ ಪಾಲ್ಗೊಂಡಿದ್ದು, ಅವರ ಆಟ ಪ್ರಶ್ನಾತೀತವಾಗಿತ್ತು. ಆದರೂ ಅವರನ್ನು ಕ್ರಿಕೆಟೇತರ ಕಾರಣಗಳಿಗೆ ಬಲಿಪಶು ಮಾಡಲಾಗುತ್ತಿದೆ. ಈ ಕುರಿತು ಮಾತನಾಡಲು ನನ್ನಲ್ಲಿ ಪದಗಳೇ ಇಲ್ಲ, ಇದು ಭಾರತೀಯ ಕ್ರಿಕೆಟ್‌ನಲ್ಲಿಯೇ ಅತ್ಯಂತ ವಿಷಾದದ ಕ್ಷಣ ಎಂದಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X