ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ಯಾವರೆಕೊಪ್ಪ ಅಭಯಾರಣ್ಯದಲ್ಲೀಗ ಹೆಚ್ಚಿದ ಆಕರ್ಷಣೆ

By Staff
|
Google Oneindia Kannada News

ತ್ಯಾವರೆಕೊಪ್ಪ ಅಭಯಾರಣ್ಯದಲ್ಲೀಗ ಹೆಚ್ಚಿದ ಆಕರ್ಷಣೆ
ಹುಲಿ ಸಂತತಿ ಏರಿಕೆ, ಹುಲಿ-ಸಿಂಹಗಳಿಗೆ ಪ್ರತ್ಯೇಕ ಸಫಾರಿ -ಕರ್ಕೀಕರ್‌

ಶಿವಮೊಗ್ಗ : ಇತ್ತೀಚೆಗೆ ಹುಲಿಯಾಂದು ಮೂರು ಮರಿಗಳಿಗೆ ಜನ್ಮ ನೀಡಿರುವುದು ಸೇರಿದಂತೆ, ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಇದರಿಂದ ಸಫಾರಿಗೆ ಹೊಸ ಆಕರ್ಷಣೆ ಉಂಟಾಗಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಉಪ ಅರಣ್ಯ ಸಂರಕ್ಷಕ(ವನ್ಯಜೀವಿ ವಿಭಾಗ) ಕರ್ಕೀಕರ್‌, ತ್ಯಾವರೆಕೊಪ್ಪ ಅಭಯಾರಣ್ಯದಲ್ಲಿ ಹುಲಿ-ಸಿಂಹಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂಬ ಅಂಶವನ್ನು ತಿಳಿಸಿದರು.

ಇತ್ತೀಚೆಗೆ ಇಲ್ಲಿನ ಹುಲಿಯಾಂದು ಮೂರು ಮರಿ ಹಾಕಿದ್ದು, ಶಾರದಾ ಎಂಬ ಚಿರತೆ ಸಹ ಮರಿಯಾಂದನ್ನು ಹಾಕಿದೆ. ಹಾಗಾಗಿ, ಈಗ ಅಭಯಾರಣ್ಯದಲ್ಲಿ ಹುಲಿ, ಸಿಂಹ ಮತ್ತು ಚಿರತೆಗಳ ಸಂಖ್ಯೆ ಒಟ್ಟು 18ಕ್ಕೇರಿದ್ದು, ಎಲ್ಲವೂ ಆರೋಗ್ಯದಿಂದಿವೆ ಎಂದು ವಿವರಿಸಿದರು.

ಈಗಿರುವ 190ಹೆಕ್ಟೇರು ಅಭಯಾರಣ್ಯ ಪ್ರದೇಶವನ್ನು 250ಹೆಕ್ಟೇರುಗಳಿಗೆ ವಿಸ್ತರಿಸುವ ಪ್ರಸ್ತಾವನೆಯನ್ನು, ಕೇಂದ್ರ ಪ್ರಾಣಿಸಂಗ್ರಹಾಲಯ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ. ಹುಲಿ ಮತ್ತು ಸಿಂಹಗಳಿಗೆ ಪ್ರತ್ಯೇಕ ಅಭಯಾರಣ್ಯ ನಿರ್ಮಿಸುವ ಕುರಿತು ಪ್ರಸ್ತಾವನೆಯಲ್ಲಿ ಹೇಳಲಾಗಿದೆ ಎಂದು ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X