ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎದೆಹಾಲಿನ ಮಹತ್ವ ಸಾರಿದ ಡಾ.ಆಶಾರ ಕಿರೀಟಕ್ಕೆ ಗರಿ

By Staff
|
Google Oneindia Kannada News

ಎದೆಹಾಲಿನ ಮಹತ್ವ ಸಾರಿದ ಡಾ.ಆಶಾರ ಕಿರೀಟಕ್ಕೆ ಗರಿ
ಬೆಂಗಳೂರು ಜಿಲ್ಲಾ ಸ್ತನ್ಯಪಾನ ಉತ್ತೇಜನಾ ಘಟಕಕ್ಕೆ ಪ್ರತಿಷ್ಠಿತ ಪ್ರಶಸ್ತಿ

ಬೆಂಗಳೂರು : ಎದೆಹಾಲಿನ ಮಹತ್ವ ಸಾರುತ್ತಿರುವ ನಗರದ ವೈದ್ಯೆ ಡಾ.ಆಶಾ ಬೆನಕಪ್ಪ ಅವರ ಸೇವೆಗೆ ಮಾನ್ಯತೆ ದೊರೆತಿದೆ. ಅವರ ನೇತೃತ್ವದ ಬೆಂಗಳೂರು ಜಿಲ್ಲಾ ಸ್ತನ್ಯಪಾನ ಉತ್ತೇಜನಾ ಘಟಕಕ್ಕೆ‘ವಿಶ್ವ ಸ್ತನ್ಯಪಾನ ಸಪ್ತಾಹ’ ಪ್ರಶಸ್ತಿ ಸಂದಿದೆ.

ಡಿ.10ರಂದು ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಡಾ.ಆಶಾ ಬೆನಕಪ್ಪ ಅವರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಸ್ತನ್ಯಪಾನದ ಬಗ್ಗೆ ವಿಶೇಷವಾಗಿ ಅಧ್ಯಯನ ನಡೆಸಿರುವ ಡಾ.ಆಶಾ ಬೆನಕಪ್ಪ ಅವರ ಸೇವೆಗೆ, ಈ ಹಿಂದೆ 2003ರಲ್ಲಿ ನೆದರ್‌ಲ್ಯಾಂಡ್‌ ಸರ್ಕಾರ ‘ಸೀಡ್‌ ಗ್ರ್ಯಾಂಡ್‌’ ಪ್ರಶಸ್ತಿ ನೀಡಿ ಗೌರವಿಸಿತ್ತು. ಸ್ತನ್ಯಪಾನದ ಪ್ರಾಮುಖ್ಯತೆ ಬಗೆಗೆ ಆಶಾ ಬೆನಕಪ್ಪ , ಪ್ರತಿ ಶನಿವಾರ ಉದಯ ಟೀವಿಯಲ್ಲಿ ಕಾರ್ಯಕ್ರಮವೊಂದನ್ನು ಪ್ರಸ್ತುತಪಡಿಸುತ್ತಿದ್ದಾರೆ. ಅವರ ‘ಎದೆಹಾಲು’ ಎಂಬ ಕೃತಿ ಜನಪ್ರಿಯವಾಗಿದೆ.

ಡಾ.ಆಶಾ ಬೆನಕಪ್ಪ ಅವರಿಗೆ ಅಭಿನಂದನೆ ಹೇಳ ಬೇಕೇ? ಅವರ ಮೊಬೈಲ್‌ ಸಂಖ್ಯೆ -98450 73130

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X