ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸದನದಲ್ಲಿ ಶಿವಸೇನೆ ಶಾಸಕನಿಂದ ಆತ್ಮಹತ್ಯೆಗೆ ಯತ್ನ
ಸದನದಲ್ಲಿ
ಶಿವಸೇನೆ
ಶಾಸಕನಿಂದ
ಆತ್ಮಹತ್ಯೆಗೆ
ಯತ್ನ
ರೈತರ
ನಿರ್ಲಕ್ಷ್ಯಕ್ಕೆ
ಖಂಡನೆ,
ಪ್ರತಿಭಟನೆ
:
ಸಂಚಲನ
ಸೃಷ್ಟಿಸಿದ
ಗುಲಾಬ್ರಾವ್...
ಪ್ರಶ್ನೋತ್ತರ ವೇಳೆಯನ್ನು ಅಮಾನತುಗೊಳಿಸಿ ರೈತರ ಸಮಸ್ಯೆ ಕೈಗೆತ್ತಿಕೊಳ್ಳಬೇಕು ಎಂದು ವಿಧಾನಸಭಾ ಪ್ರತಿಪಕ್ಷ ನಾಯಕ ರಾಮದಾಸ್ ಕದಮ್ ಸ್ಪೀಕರ್ ಅವರನ್ನು ಆಗ್ರಹಪಡಿಸಿದರು. ಆಗ ಗುಲಾಬ್ರಾವ್ ಗವಾಂಡೆ ಸೀಮೆ ಎಣ್ಣೆ ತುಂಬಿದ ಬಾಟಲಿ ಮತ್ತು ವಿಷದೊಂದಿಗೆ ಸದನದ ಬಾವಿಗಿಳಿದು ಆತ್ಮಹತ್ಯೆಗೆ ಪ್ರಯತ್ನಿಸಿದರು.
ಸೀಮೆ ಎಣ್ಣೆ ಮೈಮೇಲೆ ಸುರಿದುಕೊಂಡು, ವಿಷ ಕುಡಿವ ಯತ್ನಮಾಡಿದ ಗವಾಂಡೆ ಅವರನ್ನು ಪಕ್ಷಭೇದ ಮರೆತು ಸದನದ ಸದಸ್ಯರು ರಕ್ಷಿಸಿದರು. ಆನಂತರ ಅವರನ್ನು ಸದನದ ಹೊರಗೆ ಕರೆದೊಯ್ಯಲಾಯಿತು.
ಅಕೋಟ್ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುತ್ತಿರುವ ಗವಾಂಡೆ ಶಿವಸೇನಾ ಪಕ್ಷದ ಸದಸ್ಯ. ಈ ಘಟನೆಯಿಂದ ಸ್ಪೀಕರ್ ಬಾಬಾಸಾಹೇಬ್ ಕುಪೇಕರ್ ಕಲಾಪವನ್ನು ಮುಂದೂಡಿದರು.
(ಏಜನ್ಸೀಸ್)
ಮುಖಪುಟ / ವಾರ್ತೆಗಳು
Comments
Story first published: Tuesday, December 6, 2005, 23:53 [IST]