ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದನದಲ್ಲಿ ಶಿವಸೇನೆ ಶಾಸಕನಿಂದ ಆತ್ಮಹತ್ಯೆಗೆ ಯತ್ನ

By Staff
|
Google Oneindia Kannada News

ಸದನದಲ್ಲಿ ಶಿವಸೇನೆ ಶಾಸಕನಿಂದ ಆತ್ಮಹತ್ಯೆಗೆ ಯತ್ನ
ರೈತರ ನಿರ್ಲಕ್ಷ್ಯಕ್ಕೆ ಖಂಡನೆ, ಪ್ರತಿಭಟನೆ : ಸಂಚಲನ ಸೃಷ್ಟಿಸಿದ ಗುಲಾಬ್‌ರಾವ್‌...

ನಾಗಪುರ(ಮಹಾರಾಷ್ಟ್ರ) : ರಾಜ್ಯ ಸರ್ಕಾರ ರೈತರ ಪರ ದಿವ್ಯನಿರ್ಲಕ್ಷ್ಯತಾಳಿದೆ ಎಂದು ಪ್ರತಿಭಟನೆಗಿಳಿದ ಶಾಸಕ ಗುಲಾಬ್‌ರಾವ್‌ ಗವಾಂಡೆ ಸದನದಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ.

ಪ್ರಶ್ನೋತ್ತರ ವೇಳೆಯನ್ನು ಅಮಾನತುಗೊಳಿಸಿ ರೈತರ ಸಮಸ್ಯೆ ಕೈಗೆತ್ತಿಕೊಳ್ಳಬೇಕು ಎಂದು ವಿಧಾನಸಭಾ ಪ್ರತಿಪಕ್ಷ ನಾಯಕ ರಾಮದಾಸ್‌ ಕದಮ್‌ ಸ್ಪೀಕರ್‌ ಅವರನ್ನು ಆಗ್ರಹಪಡಿಸಿದರು. ಆಗ ಗುಲಾಬ್‌ರಾವ್‌ ಗವಾಂಡೆ ಸೀಮೆ ಎಣ್ಣೆ ತುಂಬಿದ ಬಾಟಲಿ ಮತ್ತು ವಿಷದೊಂದಿಗೆ ಸದನದ ಬಾವಿಗಿಳಿದು ಆತ್ಮಹತ್ಯೆಗೆ ಪ್ರಯತ್ನಿಸಿದರು.

ಸೀಮೆ ಎಣ್ಣೆ ಮೈಮೇಲೆ ಸುರಿದುಕೊಂಡು, ವಿಷ ಕುಡಿವ ಯತ್ನಮಾಡಿದ ಗವಾಂಡೆ ಅವರನ್ನು ಪಕ್ಷಭೇದ ಮರೆತು ಸದನದ ಸದಸ್ಯರು ರಕ್ಷಿಸಿದರು. ಆನಂತರ ಅವರನ್ನು ಸದನದ ಹೊರಗೆ ಕರೆದೊಯ್ಯಲಾಯಿತು.

ಅಕೋಟ್‌ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುತ್ತಿರುವ ಗವಾಂಡೆ ಶಿವಸೇನಾ ಪಕ್ಷದ ಸದಸ್ಯ. ಈ ಘಟನೆಯಿಂದ ಸ್ಪೀಕರ್‌ ಬಾಬಾಸಾಹೇಬ್‌ ಕುಪೇಕರ್‌ ಕಲಾಪವನ್ನು ಮುಂದೂಡಿದರು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X