ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಉಮಾ’ಭಾರತ : ಆಡ್ವಾಣಿಗೆ ಪೇಜಾವರ ಶ್ರೀಗಳ ಪತ್ರ

By Staff
|
Google Oneindia Kannada News

‘ಉಮಾ’ಭಾರತ : ಆಡ್ವಾಣಿಗೆ ಪೇಜಾವರ ಶ್ರೀಗಳ ಪತ್ರ
ಬಿಜೆಪಿಯಲ್ಲಿ ಆಡ್ವಾಣಿ ‘ಅಸಮರ್ಥ’ನಾಯಕರು -ಉಮಾ ವಾಗ್ದಾಳಿ

ಉಡುಪಿ : ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರನ್ನು ಅಮಾನತುಗೊಳಿಸಿರುವುದರ ಬಗ್ಗೆ, ಪೇಜಾವರ ಮಠದ ಶ್ರೀಗಳಾದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಅಸಮಾಧಾನಗೊಂಡಿದ್ದಾರೆ.

ಅವರು ಈ ಬಗ್ಗೆ ಬಿಜೆಪಿ ಅಧ್ಯಕ್ಷ ಎಲ್‌.ಕೆ.ಆಡ್ವಾಣಿ ಅವರಿಗೆ ಪತ್ರ ಬರೆದಿದ್ದಾರೆ. ಉಮಾ ವಿರುದ್ಧ ಬಿಜೆಪಿ ಶಿಸ್ತು ಕ್ರಮ ಜರುಗಿಸುವ ಅಗತ್ಯವಿರಲಿಲ್ಲ. ದಲಿತ ಮಹಿಳೆಗೆ ಎರಡನೇ ಸಲ ಬಿಜೆಪಿ ಅನ್ಯಾಯ ಮಾಡಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

ಹುಬ್ಬಳ್ಳಿ ಧ್ವಜಾರೋಹಣಕ್ಕೆ ಸಂಬಂಧಿಸಿದ ಆರೋಪದಿಂದ ಮುಕ್ತರಾದ ತಕ್ಷಣ ಉಮಾಭಾರತಿ ಅವರಿಗೆ ಬಿಜೆಪಿ, ಮಧ್ಯಪ್ರದೇಶದ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕಾಗಿತ್ತು. ಉಮಾ ಅವರನ್ನು ಬಿಜೆಪಿ ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಶ್ರೀಗಳು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮತ್ತೆ ಟೀಕೆ : ಬಿಜೆಪಿಯಿಂದ ಅಮಾನತುಗೊಂಡಿರುವ ಉಮಾಭಾರತಿ, ಪಕ್ಷದ ನಾಯಕರ ಮೇಲೆ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. ಆಡ್ವಾಣಿ ಅವರನ್ನು ‘ಅಸಮರ್ಥ’ ಎಂದು ಟೀಕಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X