ಶಿವಸೇನೆಗೆ ಬೈಬೈ... ‘ಹಿಂದೂ ಸೇನೆ’ಗೆ ಸೈ -ಮುತಾಲಿಕ್
ಶಿವಸೇನೆಗೆ
ಬೈಬೈ...
‘ಹಿಂದೂ
ಸೇನೆ’ಗೆ
ಸೈ
-ಮುತಾಲಿಕ್
ಗೋವಿಂದಾಚಾರ್ಯ,
ಉಮಾಭಾರತಿ
ಬೆಂಬಲ...
ಪಕ್ಷಕ್ಕೆ
ಆನೆ
ಬಲ...
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಶಿವಸೇನೆಯ ಭಾಷಾ ದ್ವೇಷದ ನಿಲುವು ಆಘಾತ ಉಂಟುಮಾಡಿದೆ. ರಾಜ್ಯದಲ್ಲಿ ಹಿಂದುತ್ವ ಹಾಗೂ ಕನ್ನಡ ನೆಲ-ಜಲದ ಬಗ್ಗೆ ಕಾಳಜಿ ಇರುವ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಹಿಂದೂ ಸೇನೆ ಎಂಬ ಪ್ರಾದೇಶಿಕ ಪಕ್ಷ ಸ್ಥಾಪಿಸಲಾಗುವುದು ಎಂದು ಹೇಳಿದರು.
ಬಿಜೆಪಿಯಿಂದ ಸಿಡಿದು ಹೋಗಿರುವ ಹಿರಿಯ ರಾಜಕಾರಣಿ ಕೆ.ಎನ್.ಗೋವಿಂದಾಚಾರ್ಯರ ಮಾರ್ಗದರ್ಶನ ಪಡೆದಿದ್ದೇನೆ. ಉಮಾಭಾರತಿ ಅವರ ಬೆಂಬಲವೂ ನಮಗೆ ದೊರೆಯಲಿದೆ. ಅಲ್ಲದೆ ಬಿಜೆಪಿಯಿಂದ ಬೇಸತ್ತ ಅನೇಕ ನಾಯಕರು ನಮ್ಮೊಂದಿಗೆ ಕೈಜೋಡಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಜರಂಗ ದಳದ ದಕ್ಷಿಣ ಭಾರತ ಸಂಚಾಲಕರಾಗಿ ದುಡಿದಿದ್ದ ಅವರು, ಬಿಜೆಪಿ ನಾಯಕರೊಂದಿಗೆ ಮುನಿಸಿಕೊಂಡಿದ್ದರು. ಆನಂತರ ಶಿವಸೇನೆ ಸೇರಿ ರಾಜ್ಯ ಘಟಕದ ಅಧ್ಯಕ್ಷರೂ ಆಗಿದ್ದರು. ಶಿವಸೇನೆ ಗಡಿವಿವಾದದಲ್ಲಿ ಮೂಗು ತೂರಿಸುತ್ತಿರುವ ಕಾರಣ, ಆ ಪಕ್ಷದಿಂದಲೂ ಅವರು ಹೊರಬರುತ್ತಿರುವುದು ಗಮನಾರ್ಹವಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು