ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಲಿಕೆಯಲ್ಲಿ ಕನ್ನಡ ಡಿಂಡಿಮ -ಹೊಸ ಮೇಯರ್‌ ಘೋಷಣೆ

By Staff
|
Google Oneindia Kannada News

ಪಾಲಿಕೆಯಲ್ಲಿ ಕನ್ನಡ ಡಿಂಡಿಮ -ಹೊಸ ಮೇಯರ್‌ ಘೋಷಣೆ
ಮೊದಲ ಬಾರಿಗೆ ಅಲ್ಪಸಂಖ್ಯಾತ ಕೋಮಿಗೆ ಮೇಯರ್‌ ಸ್ಥಾನ, ಉಪಮೇಯರ್‌ ಆಗಿ ಲಕ್ಷ್ಮೀನಾರಾಯಣ ಆಯ್ಕೆ

ಬೆಂಗಳೂರು : ಮಹಾನಗರ ಪಾಲಿಕೆ ನೂತನ ಮೇಯರ್‌ ಆಗಿ ಆಯ್ಕೆಗೊಂಡಿರುವ ಕಾಂಗ್ರೆಸ್‌ನ ಮುಮ್ತಾಜ್‌ ಬೇಗಂ, ಪಾಲಿಕೆ ಆಡಳಿತದಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಘೋಷಿಸಿದ್ದಾರೆ.

ಪಾಲಿಕೆಯ 43ನೇ ಮೇಯರ್‌ ಆಗಿ ಆಯ್ಕೆಯಾಗಿರುವ ಶಿವಾಜಿನಗರ ವಾರ್ಡ್‌ನ ಸದಸ್ಯೆ ಮುಮ್ತಾಜ್‌ ಅವರು, ಅಲ್ಲಾನ ಸ್ಮರಣೆಯಾಂದಿಗೆ ಅಧಿಕಾರ ಸ್ವೀಕರಿಸಿದ್ದಾರೆ.

ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ವಾರ್ಡ್‌ನ ಸದಸ್ಯ ಎಂ.ಲಕ್ಷ್ಮೀನಾರಾಯಣ, ಉಪಮೇಯರ್‌ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಮೇಯರ್‌-ಉಪ ಮೇಯರ್‌ ಚುನಾವಣೆ ಮಂಗಳವಾರ ಸುಸೂತ್ರವಾಗಿ ನೆರವೇರಿದೆ.

100 ಸದಸ್ಯ ಬಲದ ಪಾಲಿಕೆಯಲ್ಲಿ ಒಬ್ಬ ಸದಸ್ಯರ ನಿಧನದಿಂದ 99 ಸದಸ್ಯರಿದ್ದಾರೆ. ಆಡಳಿತ ಪಕ್ಷ ಕಾಂಗ್ರೆಸ್‌ 59, ಜೆಡಿಎಸ್‌ 24 ಹಾಗೂ ಬಿಜೆಪಿ 16 ಸದಸ್ಯರನ್ನು ಹೊಂದಿದೆ.
(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X