ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭಾಜಪ ಸಂಸದೀಯ ಮಂಡಳಿ ಮೇಲೆ ಉಮಾ ಕೆಂಡಗಣ್ಣು
ಭಾಜಪ
ಸಂಸದೀಯ
ಮಂಡಳಿ
ಮೇಲೆ
ಉಮಾ
ಕೆಂಡಗಣ್ಣು
ನನ್ನನ್ನೇ
ಮುಖ್ಯಮಂತ್ರಿ
ಮಾಡಿ
ಎಂದು
ಯಾರಿಗೂ
ಹೇಳಿರಲಿಲ್ಲ
-
ಉಮಾಭಾರತಿ
ಸೋಮವಾರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಜನರಿಂದ ಚುನಾಯಿತರಾದ ಪ್ರತಿನಿಧಿಗಳು, ತಮಗೆ ಬೇಕಾದ ನಾಯಕನನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡುತ್ತಾರೆ. ಇದಕ್ಕೆ ಶಾಸಕಾಂಗ ಪಕ್ಷದ ಸಭೆ ಕರೆಯುವುದು ವಾಡಿಕೆ. ಆನಂತರ ನಾಯಕನ ಆಯ್ಕೆ ಘೋಷಿಸಲಾಗುತ್ತದೆ.
ಆದರೆ ದೇಶದಲ್ಲೇ ಮೊಟ್ಟಮೊದಲ ಬಾರಿಗೆ, ನಾಯಕನನ್ನು ಮೊದಲು ಘೋಷಿಸಲಾಗುತ್ತಿದೆ. ಆನಂತರ ಸಭೆ ನಡೆಸಿ ಆಯ್ಕೆ ಮಾಡಲಾಗುತ್ತಿದೆ. ಇಂತಹ ತೀರ್ಮಾನವನ್ನು ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷಗಳು ಮಾಡಿರಲಿಲ್ಲ. ಇದು ಭಾರತದ ರಾಜಕೀಯ ಚರಿತ್ರೆಯಲ್ಲೇ ಹೊಸತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನನ್ನೇ ಮುಖ್ಯಮಂತ್ರಿ ಮಾಡಿ ಎಂದು ಯಾವುದೇ ಶಾಸಕರಿಗೆ ನಾನು ಹೇಳಿರಲಿಲ್ಲ. ಆದರೆ ಬಿಜೆಪಿ ಸಂಸದೀಯ ಮಂಡಳಿ ತೆಗೆದುಕೊಂಡ ಈ ತೀರ್ಮಾನ ನನಗೆ ನೋವುಂಟು ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Tuesday, November 29, 2005, 23:53 [IST]