ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾಜಪ ಸಂಸದೀಯ ಮಂಡಳಿ ಮೇಲೆ ಉಮಾ ಕೆಂಡಗಣ್ಣು

By Staff
|
Google Oneindia Kannada News

ಭಾಜಪ ಸಂಸದೀಯ ಮಂಡಳಿ ಮೇಲೆ ಉಮಾ ಕೆಂಡಗಣ್ಣು
ನನ್ನನ್ನೇ ಮುಖ್ಯಮಂತ್ರಿ ಮಾಡಿ ಎಂದು ಯಾರಿಗೂ ಹೇಳಿರಲಿಲ್ಲ - ಉಮಾಭಾರತಿ

ಭೋಪಾಲ್‌ : ಶಿವರಾಜ್‌ಸಿಂಗ್‌ ಅವರನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಎಂದು ಬಿಜೆಪಿ ಸಂಸದೀಯ ಮಂಡಳಿ ಘೋಷಿಸಿದ್ದು, ನನಗೆ ನೋವು ತಂದಿದೆ ಎಂದು ಪಕ್ಷದ ನಾಯಕಿ ಉಮಾಭಾರತಿ ಹೇಳಿದ್ದಾರೆ.

ಸೋಮವಾರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಜನರಿಂದ ಚುನಾಯಿತರಾದ ಪ್ರತಿನಿಧಿಗಳು, ತಮಗೆ ಬೇಕಾದ ನಾಯಕನನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡುತ್ತಾರೆ. ಇದಕ್ಕೆ ಶಾಸಕಾಂಗ ಪಕ್ಷದ ಸಭೆ ಕರೆಯುವುದು ವಾಡಿಕೆ. ಆನಂತರ ನಾಯಕನ ಆಯ್ಕೆ ಘೋಷಿಸಲಾಗುತ್ತದೆ.

ಆದರೆ ದೇಶದಲ್ಲೇ ಮೊಟ್ಟಮೊದಲ ಬಾರಿಗೆ, ನಾಯಕನನ್ನು ಮೊದಲು ಘೋಷಿಸಲಾಗುತ್ತಿದೆ. ಆನಂತರ ಸಭೆ ನಡೆಸಿ ಆಯ್ಕೆ ಮಾಡಲಾಗುತ್ತಿದೆ. ಇಂತಹ ತೀರ್ಮಾನವನ್ನು ಕಾಂಗ್ರೆಸ್‌ ಸೇರಿದಂತೆ ಯಾವುದೇ ಪಕ್ಷಗಳು ಮಾಡಿರಲಿಲ್ಲ. ಇದು ಭಾರತದ ರಾಜಕೀಯ ಚರಿತ್ರೆಯಲ್ಲೇ ಹೊಸತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನ್ನನ್ನೇ ಮುಖ್ಯಮಂತ್ರಿ ಮಾಡಿ ಎಂದು ಯಾವುದೇ ಶಾಸಕರಿಗೆ ನಾನು ಹೇಳಿರಲಿಲ್ಲ. ಆದರೆ ಬಿಜೆಪಿ ಸಂಸದೀಯ ಮಂಡಳಿ ತೆಗೆದುಕೊಂಡ ಈ ತೀರ್ಮಾನ ನನಗೆ ನೋವುಂಟು ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X