ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ಕಂದಮ್ಮಗಳೊಂದಿಗೆ ಕೆರೆಗೆ ಹಾರಿದ ‘ಅಮ್ಮ’ನ ಕರೆಯದಿರೇ...

By Staff
|
Google Oneindia Kannada News

3 ಕಂದಮ್ಮಗಳೊಂದಿಗೆ ಕೆರೆಗೆ ಹಾರಿದ ‘ಅಮ್ಮ’ನ ಕರೆಯದಿರೇ...
ಪಾಂಡವಪುರದ ವಿ.ವಿ.ನಾಲೆಯಲ್ಲಿ ಘೋರ ದುರಂತ

ಮಂಡ್ಯ : ತನ್ನ ಮೂವರು ಹೆಣ್ಣು ಮಕ್ಕಳೊಂದಿಗೆ ಕೆರೆಗೆ ಹಾರಿದ ಮಹಾಮಾತೆ(?)ಯ ಕಥೆಯನ್ನು ಓದುಗರು ಕಳೆದ ವಾರ ಓದಿ, ವಿಷಾದ ವ್ಯಕ್ತಪಡಿಸಿದ್ದರು. ಈ ವಾರ ಮತ್ತೊಂದು ಅಂತಹದೇ ಪ್ರಕರಣ ವರದಿಯಾಗಿದೆ.

ಜ್ವರದಿಂದ ಬಳಲುತ್ತಿದ್ದ ಮಕ್ಕಳಿಗೆ ಚಿಕಿತ್ಸೆ ಕೊಡಿಸುವುದಾಗಿ, ತನ್ನೊಂದಿಗೆ ಕರೆದೊಯ್ದ ಮಹಾಮಾತೆ ಮೂರು ಮಕ್ಕಳನ್ನು ಕೆರೆಗೆ ಎಸೆದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯನ್ನು ಶಾಂತಮ್ಮ(26) ಎಂದು ಗುರ್ತಿಸಲಾಗಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ವಿಶ್ವೇಶ್ವರಯ್ಯ ನಾಲೆ, ತಾಯಿ-ಮಕ್ಕಳನ್ನು ತನ್ನ ಮಡಿಲಿಗೆ ಸೇರಿಸಿಕೊಂಡು, ಈಗ ಮೌನವಹಿಸಿದೆ. ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಹನುಮೇಗೌಡನ ಪತ್ನಿ, ಎಸ್‌.ಕೊಗಡಹಳ್ಳಿ ಗ್ರಾಮದ ಮಹಿಳೆ ಶಾಂತಮ್ಮ ಈ ದುರಂತವನ್ನು ಸೃಷ್ಟಿಸಿದ್ದಾಳೆ. ನಿಖರವಾದ ಕಾರಣ ತಿಳಿದುಬಂದಿಲ್ಲ.

ಸಹನಾ(5), ಭವಾನಿ(3) ಮತ್ತು ಪ್ರಭಾಕರ್‌(1) ಎಂಬ ತನ್ನ ಕೂಸುಗಳನ್ನು ನಾಲೆಗೆ ತಳ್ಳಿದ ಶಾಂತಮ್ಮ, ಕಡೆಯದಾಗಿ ಕೆರೆಗೆ ಹಾರಿದ್ದಾಳೆ. ಇಂತಹ ಪ್ರಕರಣಗಳು ಸಾಮಾನ್ಯ ಎನ್ನುವಂತೆ ಆಗಾಗ ಸಂಭವಿಸುತ್ತಲೇ ಇವೆ. ಎಲ್ಲಾ ಸರಿ ಈ ಸಾವು ನ್ಯಾಯವೇ? ಎಂಬ ಪ್ರಶ್ನೆ ಕೊನೆಗೂ ಉಳಿದು ಬಿಡುತ್ತದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X