ನ.18-20: ಅ.ಭಾ.ಜೈನ ಮಹಿಳಾ ಸಾಹಿತ್ಯ ಸಮ್ಮೇಳನ
ನ.18-20:
ಅ.ಭಾ.ಜೈನ
ಮಹಿಳಾ
ಸಾಹಿತ್ಯ
ಸಮ್ಮೇಳನ
ವಿವಿಧ
ವಿಚಾರಗೋಷ್ಠಿಗಳು,
ಚಾರುಕೀರ್ತಿ
ಭಟ್ಟಾರಕ
ಸ್ವಾಮೀಜಿಗಳ
ಸಾನ್ನಿಧ್ಯ...
ಶ್ರವಣಬೆಳಗೊಳದಲ್ಲಿ ನವೆಂಬರ್ 18ರಂದು ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ, ಧರ್ಮಸ್ಥಳದ ಹೇಮಾವತಿ ಹೆಗ್ಗಡೆ ಸಮ್ಮೇಳನಕ್ಕೆ ಚಾಲನೆ ನೀಡುವರು.
ಹರಿಯಾಣದ ಡಾ.ನೀಲಂ ಜೈನ್ ಅಧ್ಯಕ್ಷತೆ ವಹಿಸಲಿದ್ದು, ಮಧ್ಯಪ್ರದೇಶದ ಮಾಜಿ ಶಿಕ್ಷಣ ಸಚಿವೆ ಅಲಕಾ ಜೈನ್ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೇರಳದ ವೈನಾಡಿನ, ಪುಷ್ಪಶಾಂತಿ ವರ್ಮಾಜೈನ್ ಉದ್ಘಾಟಿಸುವರು.
ಸಮ್ಮೇಳನದ ಅಂಗವಾಗಿ ವಿವಿಧ ಗೋಷ್ಠಿಗಳು ನಡೆಯಲಿದ್ದು, ದೇಶದ ವಿವಿಧೆಡೆಗಳಿಂದ ಸಾಹಿತಿಗಳು ಮತ್ತು ಅಭಿಮಾನಿಗಳು ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ, ಸಾಲುಮರದ ತಿಮ್ಮಕ್ಕ, ಧರ್ಮಸ್ಥಳದ ರತ್ನಮ್ಮ ಹೆಗ್ಗಡೆ, ಡಾ.ಕಮಲಾ ಹಂಪನಾ, ಬಾನು ಮುಷ್ತಾಕ್, ಮಾರ್ಗರೆಟ್ ಆಳ್ವ ಮೊದಲಾದವರನ್ನು ಸನ್ಮಾನಿಸಲಾಗುವುದು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು