ನ.24ರಂದು ರಾಜ್ಯ ಬಂದ್, ಬುದ್ಧಿಜೀವಿಗಳ ಮೇಲೆ ಕಿಡಿ
ನ.24ರಂದು
ರಾಜ್ಯ
ಬಂದ್,
ಬುದ್ಧಿಜೀವಿಗಳ
ಮೇಲೆ
ಕಿಡಿ
ಮೋರೆ
ಮೊಂಡುಪಟ್ಟು,
ಕನ್ನಡಪರ
ಸಂಘಟನೆಗಳ
ಬಿಗಿಪಟ್ಟು
ಬೆಳಗಾವಿ ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರ ಷೋಕಾಸ್ ನೋಟಿಸ್ ಜಾರಿ ಮಾಡಿದ್ದು, ಈ ಕುರಿತು 15ದಿನಗಳೊಳಗೆ ಉತ್ತರ ಸಲ್ಲಿಸುವಂತೆ ಕೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಜಯ ಮೋರೆ, ನಿರ್ಣಯ ವಾಪಸ್ ಪಡೆಯುವುದಿಲ್ಲ. ಮುಂದಿನ ಪರಿಸ್ಥಿತಿ ಎದುರಿಸಲು ಸಿದ್ಧ ಎಂದಿದ್ದಾರೆ.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ನಡೆದ ವಿವಿಧ ಕನ್ನಡ ಸಂಘಟನೆಗಳ ಪದಾಧಿಕಾರಗಳ ಸಭೆ, ನವೆಂಬರ್ 22ರೊಳಗೆ ಬೆಳಗಾವಿ ಪಾಲಿಕೆಯನ್ನು ರದ್ಧುಗೊಳಿಸುವಂತೆ ಸರ್ಕಾರಕ್ಕೆ ಗಡುವು ನೀಡಿದೆ. ಒಂದು ವೇಳೆ ಇದಕ್ಕೆ ಸಕಾರತ್ಮಕವಾಗಿ ಪ್ರತಿಕ್ರಿಯೆ ದೊರೆಯದಿದ್ದಲ್ಲಿ ನವೆಂಬರ್ 24ರಂದು ಕರ್ನಾಟಕ ಬಂದ್ ನಡೆಸುವುದಾಗಿ ಎಚ್ಚರಿಸಿದೆ.
ಮಸಾಲೆ ದೋಸೆ ಸಾಹಿತಿಗಳು : ಮೋರೆಗೆ ಮಸಿ ಬಳಿದ ಕರ್ನಾಟಕರ ರಕ್ಷಣಾ ವೇದಿಕೆಯ ಕ್ರಮವನ್ನು ಖಂಡಿಸಿರುವ ಸಾಹಿತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರಶೇಖರ ಪಾಟೀಲ ಗೇಲಿ ಮಾಡಿದ್ದಾರೆ.
ಮಸಾಲೆ ದೋಸೆ ಸಾಹಿತಿಗಳಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸಲಾಗದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಯು.ಆರ್.ಅನಂತಮೂರ್ತಿ, ಡಾ.ಚಿದಾನಂದ ಮೂರ್ತಿ, ಡಾ. ಹಂಪ ನಾಗರಾಜಯ್ಯ, ಜಿ.ಕೆ.ಗೋವಿಂದರಾವ್, ಎಸ್.ಜಿ.ಸಿದ್ದರಾಮಯ್ಯ ಸೇರಿದಂತೆ ಸಾಹಿತ್ಯವಲಯದ ಪ್ರಮುಖರು, ಮೋರೆಯ ಮೇಲಾದ ಹಲ್ಲೆಯನ್ನು ಖಂಡಿಸಿದ್ದು ಇಲ್ಲಿ ಉಲ್ಲೇಖನೀಯ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು