2005ನೇ ಸಾಲಿನ ಹೆಲನ್ ಕೆಲರ್ ಪ್ರಶಸ್ತಿ ಪ್ರಕಟ
2005ನೇ
ಸಾಲಿನ
ಹೆಲನ್
ಕೆಲರ್
ಪ್ರಶಸ್ತಿ
ಪ್ರಕಟ
ದೇಶದ
ಮೊದಲ
ಅಂಧ
ಕಂಪ್ಯೂಟರ್
ಇಂಜಿನಿಯರ್ಗೆ
ಸಂದ
ಗೌರವ...
ಶನಿವಾರ 2005ನೇ ಸಾಲಿನ ಹೆಲನ್ ಕೆಲರ್ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು. ಕರ್ನಾಟಕ ಮೂಲದ ಹರ್ಷಕುಮಾರ್, ಪಟಾಕಿ ದುರಂತದಲ್ಲಿ ಕಣ್ಣು ಕಳೆದುಕೊಂಡಿದ್ದರು. ಇವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಹಿತಿ ತಂತ್ರಜ್ಞಾನ ವಿಭಾಗದ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂಧರು ಕಂಪ್ಯೂಟರ್ ಪರದೆಯನ್ನು ಓದುವ ಸಾಫ್ಟ್ವೇರ್ ತಯಾರಿಸಿದ ಸಾಧನೆ ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.
ಕಂಪನಿ ಹಾಗೂ ಸಂಘ ಸಂಸ್ಥೆಗಳ ವಿಭಾಗದ ಪ್ರಶಸ್ತಿಯನ್ನು ಕರ್ನಾಟಕ ರಮಣ ಮಹರ್ಷಿ ಅಕಾಡೆಮಿ ಸೇರಿದಂತೆ 4ಸಂಸ್ಥೆಗಳು ಪಡೆದುಕೊಂಡಿವೆ. ಅಂಗವಿಕಲರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅಂಗವಿಕಲೇತರ ವಿಭಾಗದ ಪ್ರಶಸ್ತಿಯನ್ನು ಎನೇಬಲ್ ಇಂಡಿಯಾದ ಶಾಂತಿ ರಾಘವನ್, ಸ್ಪರ್ಶಜ್ಞಾನದಿಂದಲೇ ದೂರವಾಣಿ ನಿರ್ವಹಣೆ ತಂತ್ರಜ್ಞಾನ ಕಂಡು ಹಿಡಿದ ಶ್ಯಾಮ್ ಕೇದಾರೆ ಮತ್ತು ಗೋವಾದ ಫಾದರ್ ವಲೇರಿನೋ ವಾಜ್ ಪಡೆದಿದ್ದಾರೆ.
12ಸಾವಿರ ಅಂಗವಿಕಲರಿಗೆ ಸಹಾಯ ಮಾಡಿದ ಪಾರ್ಶ್ವವಾಯು ಪೀಡಿತ ಸಮಾಜ ಸೇವಕಿ, ಕೊಲ್ಲಾಪುರದ ನಸೀಮಾ ಹರ್ಜುಕ್ ಮತ್ತು ಸಾವಿರಾರು ಮಂದಿಗೆ ಉದ್ಯೋಗ ನೀಡುವಲ್ಲಿ ಶ್ರಮಿಸಿದ ಹುಟ್ಟು ಅಂಗವಿಕಲ, ಚೆನ್ನೈನ ಎಸ್. ಶಂಕರರಾಮನ್ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು