ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸೈದ್ಧಾಂತಿಕ ನೇತಾರ ಪ್ರೊ.ಮಧು ದಂಡವತೆ ಇನ್ನಿಲ್ಲ
ಸೈದ್ಧಾಂತಿಕ
ನೇತಾರ
ಪ್ರೊ.ಮಧು
ದಂಡವತೆ
ಇನ್ನಿಲ್ಲ
ಸರಳ
ಸಜ್ಜನಿಕೆಯ
ನೇತಾರ...
ಬರೆದದ್ದು
ಶುದ್ಧ
ರಾಜಕೀಯ
ಚಿತ್ತಾರ...
ದೀರ್ಘ ಕಾಲದಿಂದ ಕ್ಯಾನ್ಸರ್ ರೋಗದಿಂದ ನರಳುತ್ತಿದ್ದ ಅವರು, ಕಳೆದ ಮೂರು ತಿಂಗಳುಗಳಿಂದ ನಗರದ ಜಸ್ಲೋಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪುತ್ರ ಉದಯ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಸಮಾಜವಾದಿ ಸಿದ್ಧಾಂತದ ಪ್ರಭಾವಕ್ಕೊಳಗಾಗಿದ್ದ ಅವರು, ಉಪನ್ಯಾಸಕ ವೃತ್ತಿ ತೊರೆದು ರಾಜಕೀಯ ಪ್ರವೇಶ ಮಾಡಿದ್ದರು. ತಮ್ಮ ರಾಜಕೀಯ ಬದುಕಿನುದ್ದಕ್ಕೂ ಶುದ್ಧ ವ್ಯಕ್ತಿಯಾಗಿದ್ದ ಅವರು, ಮೌಲ್ಯಾಧಾರಿತ ರಾಜಕೀಯದ ಪ್ರತಿಪಾದಕರಾಗಿದ್ದರು.
ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ, ರೈಲ್ವೆ ಮತ್ತು ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಅವರು ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಅವರ ಅಗಲಿಕೆಯಿಂದ ರಾಷ್ಟ್ರವು ಒಬ್ಬ ಪ್ರಜ್ಞಾವಂತ ಹಾಗೂ ಬುದ್ಧಿಜೀವಿ ರಾಜಕೀಯ ನೇತಾರನನ್ನು ಕಳೆದುಕೊಂಡತಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Sunday, November 13, 2005, 23:53 [IST]