ಬೆಳಕು ತಂದ ಡಾ. ಎಂ.ಸಿ.ಮೋದಿ ಇನ್ನಿಲ್ಲ!
ಬೆಳಕು
ತಂದ
ಡಾ.
ಎಂ.ಸಿ.ಮೋದಿ
ಇನ್ನಿಲ್ಲ!
ಗಿನ್ನಿಸ್
ದಾಖಲೆಯ
ಹೆಸರಾಂತ
ನೇತ್ರವೈದ್ಯ
ಹೃದಯಾಘಾತಕ್ಕೆ
ಬಲಿ...
ಇಂದು
ಅವರಿಲ್ಲ
,
ಆದರೆ
ಅವರು
ನೀಡಿದ
ಬೆಳಕು
ನಿರಂತರ...
ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದ ಅವರು, ಓರ್ವ ಪುತ್ರನನ್ನು ಅಗಲಿದ್ದಾರೆ. ಭಾರತದಲ್ಲಿ 60ಲಕ್ಷ ರೋಗಿಗಳಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ನೀಡುವ ಮೂಲಕ ಅವರು ಗಿನ್ನಿಸ್ ಪುಟಗಳನ್ನು ಸೇರಿದ್ದರು.
ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಕಣ್ಣಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳನ್ನು ಅವರು ಯಶಸ್ವಿಯಾಗಿ ಕೈಗೊಂಡಿದ್ದರು. ಲಕ್ಷಾಂತರ ಮಂದಿಗೆ ಶಸ್ತ್ರ ಚಿಕಿತ್ಸೆ ಮೂಲಕ ದೃಷ್ಟಿ ನೀಡಿದ್ದ ಮೋದಿ ಅಂದರೆ ಕನ್ನಡಿಗರಿಗೆ ಹೆಮ್ಮೆ. ತಮ್ಮ ಇಳಿವಯಸ್ಸಿನಲ್ಲಿಯೂ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ ಹೆಗ್ಗಳಿಕೆ ಮೋದಿ ಅವರಿಗೆ ಸಂದಿತ್ತು.
ಬಿಜಾಪುರ ಜಿಲ್ಲೆಯ ಮೋದಿ, ಸರಳ ಮತ್ತು ಸುಸಂಸ್ಕೃತಿಯ ಪ್ರತಿರೂಪ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದ ಅವರು, ವಿಧಾನ ಪರಿಷತ್ತು ಸದಸ್ಯರಾಗಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು