ಬ್ಲೇಡ್ ಕಂಪನಿಗಳ ಪಟ್ಟಿಗೆ ಮತ್ತೆೈದು ಸಂಸ್ಥೆಗಳು?
ಬ್ಲೇಡ್
ಕಂಪನಿಗಳ
ಪಟ್ಟಿಗೆ
ಮತ್ತೆೈದು
ಸಂಸ್ಥೆಗಳು?
ಪೊಲೀಸರಿಗೆ
ಪರ್ಯಾಯವಾಗಿ
ತನಿಖೆ,
3ತಿಂಗಳಲ್ಲಿ
ವರದಿ
-
ಶಾಸಕ
ಜಿ.ಟಿ.ದೇವೇಗೌಡ
ಸದನ ಸಮಿತಿಯ ಅಧ್ಯಕ್ಷ , ಶಾಸಕ ಜಿ.ಟಿ.ದೇವೇಗೌಡ, ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಈ ಬಗ್ಗೆ ಸದಸ ಸಮಿತಿ ಗಂಭೀರವಾಗಿ ತನಿಖೆ ನಡೆಸಲಿದೆ ಎಂದರು.
ಅರಸು ಫೌಂಡೇಶನ್, ಕರ್ನಾಟಕ ಹಣಕಾಸು ಸಂಸ್ಥೆ, ಧರ್ಮಶ್ರೀ ಫೌಂಡೇಶನ್, ಮೆಡಿನೋವಾ ಡಯಾಗ್ನೋಸಿಸ್ ಮತ್ತು ಕಾವೇರಿ ನಗರ ಸಹಕಾರ ಬ್ಯಾಂಕ್ಗಳ ವಿರುದ್ಧ ತಲಾ ಒಂದೊಂದು ದೂರುಗಳು ಬಂದಿವೆ. ಪೊಲೀಸರಿಗೆ ಪರ್ಯಾಯವಾಗಿ ತನಿಖೆ ಆರಂಭಿಸಿರುವ ಸದನ ಸಮಿತಿ, ಮೂರು ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ತಿಳಿಸಿದರು.
ಸದನ ಸಮಿತಿಯ ಸದಸ್ಯ, ಶಾಸಕ ಮಾಧುಸ್ವಾಮಿ ಮಾತನಾಡಿ, ಈ ಐದೂ ಸಂಸ್ಥೆಗಳ ವಿರುದ್ಧ ದೂರುಗಳು ಬಂದಿವೆ. ಆದರೆ, ಸತ್ಯಾಸತ್ಯವನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ವಿನಿವಿಂಕ್ ವಂಚನೆಯ ಬೆನ್ನಲ್ಲೇ, ಪೊಲೀಸರು ದಾರ್ಶನಿಕ ಯೋಗ ಫೌಂಡೇಶನ್, ಅಕ್ಷಯ ಹಣಕಾಸು ಸಂಸ್ಥೆ ಹಾಗೂ ಕರ್ನಾಟಕ ಹಣಕಾಸು ಸಂಸ್ಥೆಗಳ ವಿರುದ್ಧ ತನಿಖೆ ಕೈಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು