ನ.24ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಲಂಕೇಶ್ ನಾಟಕೋತ್ಸವ
ನ.24ರವರೆಗೆ
ರವೀಂದ್ರ
ಕಲಾಕ್ಷೇತ್ರದಲ್ಲಿ
ಲಂಕೇಶ್
ನಾಟಕೋತ್ಸವ
ಬೆಂಗಳೂರಿನಲ್ಲಿ
ಈಗ
ನಾಟಕಗಳ
ಸುಗ್ಗಿ.
ನಟ
ಲೋಕೇಶ್
ಸಂಸ್ಮರಣೆಯ
ನಾಟಕ
ಸಪ್ತಾಹ
ಇತ್ತೀಚೆಗಷ್ಟೇ
ಮುಗಿದಿದೆ.
ಮತ್ತೊಂದು
ಕಡೆ
ರಂಗಶಂಕರದಲ್ಲಿ
ನಾಟಕಗಳ
ಹಬ್ಬ
ನಡೆಯುತ್ತಿರುವ
ಮಧ್ಯೆಯೇ,
ರವೀಂದ್ರ
ಕಲಾಕ್ಷೇತ್ರದಲ್ಲಿ
ಲಂಕೇಶ್
ನಾಟಕೋತ್ಸವ.
ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 7ಗಂಟೆಗೆ ‘ಮುಸ್ಸಂಜೆಯ ಕಥಾ ಪ್ರಸಂಗ’ ನಾಟಕದ ಪ್ರಯೋಗದೊಂದಿಗೆ ನಾಟಕೋತ್ಸವಕ್ಕೆ ಚಾಲನೆ ದೊರೆಯಲಿದೆ ಎಂದು ನಾಟಕೋತ್ಸವ ಆಯೋಜಿಸಿರುವ ನಾಟಕ ಅಕಾಡೆಮಿ ಅಧ್ಯಕ್ಷ ಶ್ರೀನಿವಾಸ್ ಜಿ.ಕಪ್ಪಣ್ಣ ತಿಳಿಸಿದ್ದಾರೆ.
ನ.24ರವರೆಗೆ ನಾಟಕೋತ್ಸವವು ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಲಿದೆ. ನಾಟಕಗಳು ಪ್ರದರ್ಶನಗೊಳ್ಳುವ ಸಮಯ ಸಂಜೆ 7ಗಂಟೆ.
ನಾಟಕೋತ್ಸವದ
ವಿವರ
:
ವೇದಿಕೆ ತಂಡವು ಋತ್ವಿಕ ಸಿಂಹ ನಿರ್ದೇಶನದಲ್ಲಿ ಪ್ರಸ್ತುತಪಡಿಸುವ ನಾಟಕ - ‘ಪೊಲೀಸರಿದ್ದಾರೆ ಎಚ್ಚರಿಕೆ’
ಸಂವಾದ : ನಾಟಕೋತ್ಸವದಲ್ಲಿ ಲಂಕೇಶ್ರ ಒಂಭತ್ತು ನಾಟಕಗಳು ಪ್ರದರ್ಶನಗೊಳ್ಳಲಿವೆ. ಪ್ರತಿ ನಾಟಕದ ಮಾರನೇ ದಿನ ಸಂಜೆ 6ಗಂಟೆಗೆ ನಾಟಕದ ನಿರ್ದೇಶಕರು, ಕಲಾವಿದರೊಂದಿಗೆ ಚರ್ಚೆ ನಡೆಸಲು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ.
ಬೀದಿ ನಾಟಕ : ಲಂಕೇಶ್ ನಾಟಕೋತ್ಸವದ ಜೊತೆಗೆ ನ.21, 22, 23ರ ಸಂಜೆ ಐದು ಗಂಟೆಗೆ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ‘ಇಪ್ಪಾ ಸಮುದಾಯ’ದ ಬೀದಿ ನಾಟಕಗಳು ಪ್ರದರ್ಶನವಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು