ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಸೇನೆ ಬಾಗಿಲಲ್ಲಿ ಬಿಜೆಪಿಯ 22ಶಾಸಕರು -ಮುತಾಲಿಕ್‌

By Staff
|
Google Oneindia Kannada News

ಶಿವಸೇನೆ ಬಾಗಿಲಲ್ಲಿ ಬಿಜೆಪಿಯ 22ಶಾಸಕರು -ಮುತಾಲಿಕ್‌
ಹುಬ್ಬಳ್ಳಿಯಲ್ಲಿ ಬೃಹತ್‌ ಹಿಂದೂ ಸಮಾವೇಶ, ಹಿಂದೂತ್ವದ ಆಧಾರದ ಮೇಲೆ ಅಧಿಕಾರ ಹಿಡಿಯುವ ಬಯಕೆ

ದಾವಣಗೆರೆ : ಕಾಂಗ್ರೆಸ್‌ ಸೇರಿದಂತೆ ರಾಜಕೀಯ ಪಕ್ಷಗಳು ದಲಿತರನ್ನು ಶೋಷಿಸುತ್ತಲೇ ಬಂದಿವೆ. ದಲಿತ ಮತ್ತು ಅಹಿಂದ ಸಮಾವೇಶಗಳಿಗೆ ಉತ್ತರವಾಗಿ ಶಿವಸೇನೆ ಹುಬ್ಬಳ್ಳಿಯಲ್ಲಿ ಹಿಂದೂ ಸಮಾವೇಶವನ್ನು ನಡೆಸಲು ಮುಂದಾಗಿದೆ ಎಂದು ಶಿವಸೇನೆ ಪಕ್ಷದ ರಾಜ್ಯಾಧ್ಯಕ್ಷ ಪ್ರಮೋದ್‌ ಮುತಾಲಿಕ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಈ ಸಮಾವೇಶದಲ್ಲಿ ಸುಮಾರು 5 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ರಾಜ್ಯದಲ್ಲಿ ಪಕ್ಷ ಬಲಗೊಳ್ಳುತ್ತಿದೆ. ಬಿಜೆಪಿಯ 22 ಶಾಸಕರು ಶಿವಸೇನೆ ಸೇರಲು ಸಮ್ಮತಿಸಿದ್ದಾರೆ. ವಿಧಾನಸಭೆಯಲ್ಲಿ ನಮಗೆ ಬಹುಮತ ಸಿಗುವುದೋ ಇಲ್ಲವೋ ಗೊತ್ತಿಲ್ಲ. ಆದರೆ, ಹಿಂದುತ್ವಕ್ಕಾಗಿ ಅಧಿಕಾರ ನಡೆಸುವ ನಿರ್ಧಾರ ಮಾಡಿದ್ದೇವೆ ಎಂದರು.

ಬೆಳಗಾವಿ ಮಹಾನಗರ ಪಾಲಿಕೆಯ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕನ್ನಡಕ್ಕೆ ಅನ್ಯಾಯವಾಗುವುದನ್ನು ಖಂಡಿತ ಸಹಿಸುವುದಿಲ್ಲ. ಕನ್ನಡ-ಮರಾಠಿ ಹಾಗೂ ತೆಲುಗು ಭಾಷಿಕರ ನಡುವೆ ಬೆಂಕಿ ಹಚ್ಚಲಾಗುತ್ತಿದೆ. ಕಳೆದ 58 ವರ್ಷ ಆಳಿದ ಕಾಂಗ್ರೆಸ್‌ ಸರ್ಕಾರ ಬೆಂಕಿ ಹಚ್ಚುತ್ತಲೇ ಬಂದಿದೆ ಎಂದು ಅಭಿಪ್ರಾಯಪಟ್ಟರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X