ನ.10ರಂದು ನಗರದಲ್ಲಿ ರಾ.ಶಿ. ಜನ್ಮಶತಮಾನೋತ್ಸವ
ನ.10ರಂದು
ನಗರದಲ್ಲಿ
ರಾ.ಶಿ.
ಜನ್ಮಶತಮಾನೋತ್ಸವ
ರವೀಂದ್ರ
ಕಲಾಕ್ಷೇತ್ರದಲ್ಲಿ
ಆರ್.ಕೆ.ಲಕ್ಷ್ಣಣ್
ಅವರ
ವ್ಯಂಗ್ಯ
ಚಿತ್ರಪ್ರದರ್ಶನ
ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೊರವಂಜಿ ಅಪರಂಜಿ ಟ್ರಸ್ಟ್ ಮತ್ತು ಹಾಸ್ಯ ಬ್ರಹ್ಮ ಟ್ರಸ್ಟ್ ಸಂಯುಕ್ತವಾಗಿ ಆಯೋಜಿಸಿರುವ ಈ ಸಮಾರಂಭವನ್ನು ನಟ ಮಾಸ್ಟರ್ ಹಿರಣ್ಣಯ್ಯ ಉದ್ಘಾಟಿಸುವರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಹಾಸ್ಯ ಸಾಹಿತಿ ಬೇಲೂರು ರಾಮಮೂರ್ತಿ, ಸಮಾರಂಭದಲ್ಲಿ ‘ರಾಶಿ ರಾಶಿ ನೆನಪು’ ಎಂಬ ಪುಸ್ತಕ ಮತ್ತು ‘ಅಪರಂಜಿ ವಿಶೇಷಾಂಕ’ ಬಿಡುಗಡೆಗೊಳ್ಳುತ್ತಿದೆ ಎಂದರು.
ರಾ.ಶಿವರಾಂ ಅವರ ‘ಕೊರವಂಜಿ ’ ಹಾಸ್ಯ ಪತ್ರಿಕೆಯಿಂದ ವೃತ್ತಿ ಬದುಕು ಆರಂಭಿಸಿದ ಆರ್.ಕೆ.ಲಕ್ಷಣ್, ಪ್ರಸ್ತುತ ಪ್ರಖ್ಯಾತ ವ್ಯಂಗ್ಯಚಿತ್ರಕಾರರಾಗಿದ್ದಾರೆ. ಅವರ ಚಿತ್ರಗಳ ಪ್ರದರ್ಶನವನ್ನು ಈ ಸಂದರ್ಭದಲ್ಲಿ ಏರ್ಪಡಿಸುವುದಾಗಿ ಹೇಳಿದರು.
ಕೊರವಂಜಿ ಅಪರಂಜಿ ಟ್ರಸ್ಟ್ನ ಟ್ರಸ್ಟಿ ಕೃಷ್ಣ ಸುಬ್ಬರಾವ್, ಅಪರಂಜಿ ಪತ್ರಿಕೆ ಸಂಪಾದಕ ಎಂ.ಶಿವಕುಮಾರ್ ಈ ಸಂದರ್ಭದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು