ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.10ರಂದು ನಗರದಲ್ಲಿ ರಾ.ಶಿ. ಜನ್ಮಶತಮಾನೋತ್ಸವ

By Staff
|
Google Oneindia Kannada News

ನ.10ರಂದು ನಗರದಲ್ಲಿ ರಾ.ಶಿ. ಜನ್ಮಶತಮಾನೋತ್ಸವ
ರವೀಂದ್ರ ಕಲಾಕ್ಷೇತ್ರದಲ್ಲಿ ಆರ್‌.ಕೆ.ಲಕ್ಷ್ಣಣ್‌ ಅವರ ವ್ಯಂಗ್ಯ ಚಿತ್ರಪ್ರದರ್ಶನ

ಬೆಂಗಳೂರು : ಹೆಸರಾಂತ ಹಾಸ್ಯ ಸಾಹಿತಿ ರಾ.ಶಿ. ಅವರ ಜನ್ಮಶತಮಾನೋತ್ಸವ ಸಮಾರಂಭವನ್ನು ನ.10ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೊರವಂಜಿ ಅಪರಂಜಿ ಟ್ರಸ್ಟ್‌ ಮತ್ತು ಹಾಸ್ಯ ಬ್ರಹ್ಮ ಟ್ರಸ್ಟ್‌ ಸಂಯುಕ್ತವಾಗಿ ಆಯೋಜಿಸಿರುವ ಈ ಸಮಾರಂಭವನ್ನು ನಟ ಮಾಸ್ಟರ್‌ ಹಿರಣ್ಣಯ್ಯ ಉದ್ಘಾಟಿಸುವರು.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಹಾಸ್ಯ ಸಾಹಿತಿ ಬೇಲೂರು ರಾಮಮೂರ್ತಿ, ಸಮಾರಂಭದಲ್ಲಿ ‘ರಾಶಿ ರಾಶಿ ನೆನಪು’ ಎಂಬ ಪುಸ್ತಕ ಮತ್ತು ‘ಅಪರಂಜಿ ವಿಶೇಷಾಂಕ’ ಬಿಡುಗಡೆಗೊಳ್ಳುತ್ತಿದೆ ಎಂದರು.

ರಾ.ಶಿವರಾಂ ಅವರ ‘ಕೊರವಂಜಿ ’ ಹಾಸ್ಯ ಪತ್ರಿಕೆಯಿಂದ ವೃತ್ತಿ ಬದುಕು ಆರಂಭಿಸಿದ ಆರ್‌.ಕೆ.ಲಕ್ಷಣ್‌, ಪ್ರಸ್ತುತ ಪ್ರಖ್ಯಾತ ವ್ಯಂಗ್ಯಚಿತ್ರಕಾರರಾಗಿದ್ದಾರೆ. ಅವರ ಚಿತ್ರಗಳ ಪ್ರದರ್ಶನವನ್ನು ಈ ಸಂದರ್ಭದಲ್ಲಿ ಏರ್ಪಡಿಸುವುದಾಗಿ ಹೇಳಿದರು.

ಕೊರವಂಜಿ ಅಪರಂಜಿ ಟ್ರಸ್ಟ್‌ನ ಟ್ರಸ್ಟಿ ಕೃಷ್ಣ ಸುಬ್ಬರಾವ್‌, ಅಪರಂಜಿ ಪತ್ರಿಕೆ ಸಂಪಾದಕ ಎಂ.ಶಿವಕುಮಾರ್‌ ಈ ಸಂದರ್ಭದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X