ದಳದಲ್ಲಿ ವಿದಳನ : ಸಿದ್ದರಾಮಯ್ಯ ಬಣದಲ್ಲೂ ಬಿರುಕು
ದಳದಲ್ಲಿ
ವಿದಳನ
:
ಸಿದ್ದರಾಮಯ್ಯ
ಬಣದಲ್ಲೂ
ಬಿರುಕು
ಉಪಾಧ್ಯಕ್ಷ
ಸ್ಥಾನದಿಂದ
ಕೋದಂಡರಾಮಯ್ಯ
ರಾಜೀನಾಮೆ
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪಕ್ಷದ ಪದಾಧಿಕಾರಿಗಳ ಆಯ್ಕೆ ವಿಚಾರದಲ್ಲಿ ನನಗೆ ಅಸಮಾಧಾನವಾಗಿದೆ. ಅಪರಾಧಿ ಹಿನ್ನೆಲೆ ಇರುವವರನ್ನು ತಂದು ಪದಾಧಿಕಾರಿಗಳನ್ನಾಗಿ ಮಾಡುವುದು ನನಗಿಷ್ಟವಿಲ್ಲ ಎಂದರು.
ಮೊದಲು ನಾನು ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದವನು. ಈಗ ಅಂಥವರ ಪಕ್ಕದಲ್ಲೇ ಕುಳಿತುಕೊಳ್ಳುವುದು ನನ್ನಿಂದಾಗದು, ಹಾಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ವರ್ತನೆ ನನಗೆ ಒಪ್ಪಿಗೆಯಾಗಿಲ್ಲ. ನಾನು ಮತ್ತು ಸಿದ್ಧರಾಮಯ್ಯ ಎತ್ತಿದ ಪ್ರಶ್ನೆಗಳಿಗೆ ಅವರು ಉತ್ತರಿಸಿಲ್ಲ. ಮೊದಲಿಗೆ ದೇವೇಗೌಡರ ವರ್ತನೆ ಖಂಡಿಸಿ, ಪ್ರೊ.ಎ.ಲಕ್ಷೀಸಾಗರ್, ಎ.ಕೆ.ಸುಬ್ಬಯ್ಯ, ವೈಜನಾಥ ಪಾಟೀಲ್ ಮತ್ತು ನಾನೂ ಸಹಿತ ಕೆಲವರು ಹೊರಬಂದೆವು.
ಆಗ ಸಿದ್ಧರಾಮಯ್ಯ, ಇಬ್ರಾಹಿಂ ಮೊದಲಾದರು ನಮ್ಮನ್ನು ಬೆಂಬಲಿಸಲಿಲ್ಲ. ಈಗ ಅವರೂ ಹೊರಬಂದಿದ್ದಾರೆ. ಮಾಡುವುದಾದರೆ ಒಳ್ಳೆಯ ರಾಜಕೀಯ ಮಾಡೋಣ, ಇಲ್ಲವಾದರೆ ಮನೆಗೆ ಹೋಗೋಣ. ಅಧಿಕಾರಕ್ಕಾಗಿ ರಾಜಕೀಯ ಮಾಡುವುದು ಬೇಕಾಗಿಲ್ಲ. ನನ್ನ ಮನಸಿಗೆ ಒಪ್ಪಿಗೆಯಾಗದಿರುವುದನ್ನು ನಾನು ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.
ರಾಜೀನಾಮೆ ಪತ್ರದ ಪ್ರತಿಗಳನ್ನು ಸಿದ್ಧರಾಮಯ್ಯ, ಸಿ.ಎಂ.ಇಬ್ರಾಹಿಂ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಕಾರ್ಯಾಧ್ಯಕ್ಷ ಬಿ.ಆರ್.ಪಾಟೀಲ್ ಅವರುಗಳಿಗೆ ಕಳುಹಿಸಿದ್ದೇನೆ ಎಂದು ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು