ಉತ್ತರ ಕರ್ನಾಟಕದಲ್ಲಿ ರಾಜ್ಯೋತ್ಸವಕ್ಕೆ ಕಪ್ಪುಬಾವುಟ
ಉತ್ತರ
ಕರ್ನಾಟಕದಲ್ಲಿ
ರಾಜ್ಯೋತ್ಸವಕ್ಕೆ
ಕಪ್ಪುಬಾವುಟ
ಮಹಾರಾಷ್ಟ್ರ
ಏಕೀಕರಣ
ಸಮಿತಿಯಿಂದ
ಮತ್ತೊಂದು
ಕಿತಾಪತಿ
ಮಹಾರಾಷ್ಟ್ರ ಏಕೀಕರಣ ಸಮಿತಿ(ಪ್ರಾದೇಶಿಕ ಪಕ್ಷ) ಅಧ್ಯಕ್ಷ ಮತ್ತು ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ವಿಜಯ್ ಮೋರೆ, ನಗರದಲ್ಲಿ ರಾಜ್ಯೋತ್ಸವವನ್ನು ವಿರೋಧಿಸಿ ಸೈಕಲ್ ಜಾಥಾವನ್ನು ಆಯೋಜಿಸಿದ್ದರು. ಸುವರ್ಣ ಮಹೋತ್ಸವಕ್ಕೆ ಕಪ್ಪುಬಾವುಟದ ಮೂಲಕ ಸಮಿತಿ ಅಸಮಾಧಾನ ಪ್ರದರ್ಶಿಸಿದೆ.
ಬೆಳಗಾವಿಯಲ್ಲಿ ಶಿಕ್ಷಕರು ಶಾಲೆಗಳಿಗೆ ಗೈರುಹಾಜರಾದ ಕಾರಣ, ಶಾಲೆಗಳಲ್ಲಿ ರಾಜ್ಯೋತ್ಸವದ ಆಚರಣೆಗಳಿಗೆ ತೆರೆ ಬಿದ್ದಿತ್ತು.
ಗುಲ್ಬರ್ಗದಲ್ಲಿ ಪ್ರತ್ಯೇಕ ರಾಜ್ಯದ ಹೋರಾಟ ಸಮಿತಿ, ಪ್ರತ್ಯೇಕ ರಾಜ್ಯದ ಧ್ವಜಾರೋಹಣವನ್ನು ನೆರವೇರಿಸಿದೆ. ರಾಜ್ಯ ಸರ್ಕಾರದ ಧೋರಣೆಗೆ ವ್ಯಾಪಕ ವಿರೋಧ ಕಂಡುಬಂದಿದೆ.
ರಾಜ್ಯೋತ್ಸವದ ದಿನವನ್ನು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಪ್ರತಿಭಟನಾ ದಿನವಾಗಿ ಆಚರಿಸಿದೆ. ಸುವರ್ಣ ಕರ್ನಾಟಕದ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸುವುದಾಗಿ ಸಮಿತಿ ಅಧ್ಯಕ್ಷ ಮತ್ತು ಶಾಸಕ ವೈಜನಾಥ ಪಾಟೀಲ ಎಚ್ಚರಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು