ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸವಣ್ಣನ ದಿರಿಸುತೊಟ್ಟು ಮಿಂಚಿದರಪ್ಪ, ಬಂಗಾರಪ್ಪ!

By Staff
|
Google Oneindia Kannada News

ಬಸವಣ್ಣನ ದಿರಿಸುತೊಟ್ಟು ಮಿಂಚಿದರಪ್ಪ, ಬಂಗಾರಪ್ಪ!
ಶ73ನೇ ವಸಂತಕ್ಕೆ ಬಂಗಾರಪ್ಪ ಪಾದರ್ಪಣೆ, ಅಧಿಕಾರ ಹಿಡಿಯುವ ಆತ್ಮವಿಶ್ವಾಸ ಪ್ರಕಟ

ಬೆಂಗಳೂರು : ಅಪಾರ ಅಭಿಮಾನಿಗಳು ಮತ್ತು ಗೆಳೆಯರೊಂದಿಗೆ ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ನಗರದಲ್ಲಿ ತಮ್ಮ 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಸದಾಶಿವನಗರದ ಬಂಗಾರಪ್ಪ ಅವರ ನಿವಾಸದಲ್ಲಿ ನಡೆದ ಈ ಸಮಾರಂಭ ವರ್ಣರಂಜಿತವಾಗಿತ್ತು. ಜರತಾರಿ ಉಡುಗೆ, ಬೆಳ್ಳಿ ಕಿರೀಟ, ಚಿನ್ನದ ಹಾರ ಮತ್ತು ಕತ್ತಿ ಹಿಡಿದು ಬಸವಣ್ಣನ ದಿರಿಸು ತೊಟ್ಟು ಬಂಗಾರಪ್ಪ ಬುಧವಾರ ಮಿಂಚುತ್ತಿದ್ದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಬಸವಣ್ಣನವರ ವಿಚಾರಗಳು ಇಷ್ಟವಾಗಿವೆ. ಅವರೇ ನನಗೆ ಮಾದರಿ. ಅಲ್ಲದೇ ಅಭಿಮಾನಿಗಳು ಪ್ರೀತಿಯಿಂದ ನೀಡಿದ ಈ ದಿರಿಸು, ಕತ್ತಿ, ಕಿರೀಟ ಮತ್ತು ಆಭರಣಗಳನ್ನು ಇಂದು ತೊಟ್ಟಿದ್ದೇನೆ ಎಂದು ತಮ್ಮ ವೇಷಕ್ಕೆ ಸ್ಪಷ್ಟನೆ ನೀಡಿದರು. S.Bangarappa

ನಂತರ ಬಂಗಾರಪ್ಪ ಅವರು, ನೆರೆದಿದ್ದ ಜನ ಸಾಗರವನ್ನುದ್ದೇಶಿಸಿ ಮಾತನಾಡುತ್ತ, ಮದಕರಿ ನಾಯಕ ಮತ್ತು ಟಿಪ್ಪುಸುಲ್ತಾನ್‌ ನಾಟಕದ ಸಂಭಾಷಣೆಯನ್ನು ಹೇಳಿ ರಂಜಿಸಿದರು. ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, ಸಮಾರಂಭದುದ್ದಕ್ಕೂ ಕತ್ತಿಯನ್ನು ಝಳಪಿಸುತ್ತಿದ್ದರು.

ಬಂಗಾರಪ್ಪ ಅವರ ಪತ್ನಿ ಶಕುಂತಲಾ, ಪುತ್ರ ಮಧುಬಂಗಾರಪ್ಪ ಸಿಹಿ ತಿನ್ನಿಸಿ, ಹರ್ಷ ವ್ಯಕ್ತಪಡಿಸಿದರು. ಶಾಸಕರಾದ ಎಚ್‌.ಹಾಲಪ್ಪ, ಬಿ.ಕೆ.ಗೋಪಾಲಕೃಷ್ಣ, ಸಮಾಜವಾದಿ ಪಕ್ಷದ ಗೋವಿಂದರಾಜು, ಮಾಜಿ ಸಚಿವ ಬಾಬುರಾವ್‌ ಚವಾಣ್‌ ಸಮಾರಂಭದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X