ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಈರುಳ್ಳಿ ಬೆಲೆ ದಿನೇ ದಿನೇ ಗಗನಮುಖಿ...
ಈರುಳ್ಳಿ
ಬೆಲೆ
ದಿನೇ
ದಿನೇ
ಗಗನಮುಖಿ...
ರಾಜ್ಯದ
ಇಳುವರಿ
ನವೆಂಬರ್ನಲ್ಲಿ
ಮಾರುಕಟ್ಟೆಗೆ,
ಬೆಲೆ
ಇಳಿಕೆ
ನಿರೀಕ್ಷೆ
ಅತಿ ಹೆಚ್ಚು ಈರುಳ್ಳಿ ಬೆಳೆ ಪ್ರದೇಶವಾದ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದ ಅಧಿಕ ಪ್ರಮಾಣದಲ್ಲಿ ಈರುಳ್ಳಿ ನಾಶಗೊಂಡಿದ್ದು, ಸೆಪ್ಟೆಂಬರ್ ಅಕ್ಟೋಬರ್ ಅವಧಿಯಲ್ಲಿ ನಗರಕ್ಕೆ ಪ್ರತಿ ತಿಂಗಳು ತಲಾ 90ಟನ್ ಈರುಳ್ಳಿ ಪೂರೈಕೆಯಾಗುತ್ತಿತ್ತು. ರಾಜ್ಯದಲ್ಲಿ ಕಳೆದ ವರ್ಷ 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದ್ದರೆ, ಈ ಸಾಲಿನಲ್ಲಿ 1.23ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ.
ಅತಿ ಹೆಚ್ಚು ಈರುಳ್ಳಿ ಬೆಳೆಯುವ ಚಿತ್ರದುರ್ಗ, ಬಳ್ಳಾರಿ, ಹಾವೇರಿ, ಗದಗ ಜಿಲ್ಲೆಗಳ ಇಳುವರಿ ನವೆಂಬರ್ನಿಂದ ಮಾರುಕಟ್ಟೆ ಪ್ರವೇಶಿಸಲಿದೆ. ಇದರಿಂದ ಬೆಲೆ ಇಳಿಮುಖವಾಗಬಹುದು ಎಂದು ತೋಟಗಾರಿಕಾ ಇಲಾಖೆ ನಿರ್ದೇಶಕ ಡಾ.ಜಿ.ಕೆ.ವಸಂತಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Sunday, October 23, 2005, 23:53 [IST]