ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಂಕಿಅಂಶಗಳ ಸಹಿತ ಗೌಡರಿಗೆ ಇನ್ಫೋಸಿಸ್ ತಿರುಗೇಟು
ಅಂಕಿಅಂಶಗಳ
ಸಹಿತ
ಗೌಡರಿಗೆ
ಇನ್ಫೋಸಿಸ್
ತಿರುಗೇಟು
ನಾರಾಯಣ
ಮೂರ್ತಿ
ರಾಜೀನಾಮೆ
ವಿಮಾನ
ನಿಲ್ದಾಣದ
ಕಾಮಗಾರಿ
ಮೇಲೆ
ಪರಿಣಾಮ
ಬೀರದು
-
ಧರ್ಮಸಿಂಗ್
ಜೆಡಿಎಸ್ ಪಕ್ಷದ ದೇವೇಗೌಡ , ಎಂ.ಪಿ.ಪ್ರಕಾಶ್ ಸೇರಿದಂತೆ ಇನ್ನಿತರ ಮುಖಂಡರು ರಾಜ್ಯಕ್ಕೆ ಇನ್ಫೋಸಿಸ್ ಸೇರಿದಂತೆ ಐಟಿಕ್ಷೇತ್ರದ ಕೊಡುಗೆ ನಗಣ್ಯ ಎಂದು ದೂರಿರುವ ಬೆನ್ನಲ್ಲಿ, ಇನ್ಫೋಸಿಸ್ ವಾಕ್ಸಮರಕ್ಕೆ ನಿಂತಿದೆ.
ರಾಜ್ಯಕ್ಕೆ
ತನ್ನ
ಕೊಡುಗೆಯನ್ನು
ಇನ್ಫೋಸಿಸ್
ಹೀಗೆ
ಪಟ್ಟಿ
ಮಾಡಿದೆ
;
- ಸಂಸ್ಥೆಯಲ್ಲಿ ಒಟ್ಟು 46,000 ಉದ್ಯೋಗಿಗಳಿದ್ದಾರೆ. ಅದರಲ್ಲಿ 22,000 ನೇರ ಉದ್ಯೋಗಗಳನ್ನು ಕರ್ನಾಟಕದಲ್ಲಿ ಸೃಷ್ಟಿ ಮಾಡಲಾಗಿದೆ. ಅಲ್ಲದೇ ಸಂಸ್ಥೆ ಆಧರಿಸಿದ ಉದ್ದಿಮೆಗಳಲ್ಲಿ ಪರೋಕ್ಷ ಉದ್ಯೋಗ ಸೃಷ್ಟಿಯಾಗಿದೆ.
- ರಾಜ್ಯದ ಸಾಫ್ಟ್ವೇರ್ ರಫ್ತಿನಲ್ಲಿ ನಮ್ಮ ಪಾಲು ಶೇ.14.
- ಬೆಂಗಳೂರಿನ ಇನ್ಫೋಸಿಸ್ ಕ್ಯಾಂಪಸ್ ಭಾರತದ ಅತಿದೊಡ್ಡ ಸಾಫ್ತ್ವೇರ್ ರಫ್ತು ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
- ಬೆಂಗಳೂರು, ಮೈಸೂರು ಮತ್ತು ಮಂಗಳೂರು ಸೇರಿದಂತೆ ರಾಜ್ಯದಲ್ಲಿ ನಾವು 1,744 ಕೋಟಿ ರೂ. ಹೂಡಿಕೆ ಮಾಡಿದ್ದೇವೆ.
- ನಾವು ಸರ್ಕಾರದಿಂದ ರಿಯಾಯಿತಿ ದರದಲ್ಲಿ ಭೂಮಿ ಪಡೆದಿಲ್ಲ. ಮಾರುಕಟ್ಟೆ ದರದಲ್ಲಿ ಭೂಮಿಯನ್ನು ಖರೀದಿಸಿದ್ದೇವೆ.
- ಉದ್ಯಮದ ವಿಸ್ತರಣೆಗೆ 850 ಎಕರೆ ಭೂಮಿ ಕೋರಿ 2000ದಲ್ಲಿ ಇನ್ಫೋಸಿಸ್ ಮನವಿ ಸಲ್ಲಿಸಿತ್ತು. ಆದರೆ ಸರ್ಕಾರ ಈ ಬಗ್ಗೆ ಮೌನವಹಿಸಿದೆ. ಆ ಭೂಮಿಯಲ್ಲಿ ಸಾಫ್ಟ್ವೇರ್ ಅಭಿವೃದ್ಧಿ ಕೇಂದ್ರ ಸ್ಥಾಪಿಸಿ, 25ಸಾವಿರ ಜನರಿಗೆ ಉದ್ಯೋಗ ನೀಡುವ ಗುರಿ ನಮ್ಮದು.
ಮುಖಪುಟ / ಐಟಿ - ಬಿಟಿ
Comments
Story first published: Saturday, October 22, 2005, 23:53 [IST]