ಸಮಾಜವಾದಿ, ಪ್ರೊ.ಮಧು ದಂಡವತೆ ಅಸ್ವಸ್ಥ
ಸಮಾಜವಾದಿ,
ಪ್ರೊ.ಮಧು
ದಂಡವತೆ
ಅಸ್ವಸ್ಥ
ಕ್ಯಾನ್ಸರ್
ತೊಂದರೆ,
ಜಸ್ಲೋಕ್
ಆಸ್ಪತ್ರೆಗೆ
ದಾಖಲು
ಶುಕ್ರವಾರ ಈ ಕುರಿತು ಆಸ್ಪತ್ರೆಯ ಮೂಲಗಳು ಖಚಿತಪಡಿಸಿವೆ. ಎರಡು ದಿನಗಳ ಹಿಂದಷ್ಟೆ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡಾ.ಎಂ.ಕೆ.ಕಾಮತ್ ನೇತೃತ್ವದ ತಂಡ ಅವರ ಆರೋಗ್ಯದತ್ತ ಗಮನ ನೀಡುತ್ತಿದೆ.
ರಾಮಮನೋಹರ ಲೋಹಿಯಾ ಮತ್ತು ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ಗರಡಿಯಲ್ಲಿ ಪಳಗಿದ ಸಮಾಜವಾದಿ ನಾಯಕ ದಂಡವತೆ ದೇಶದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿದವರು. ಜನತಾ ಪರಿವಾರ ಅನೇಕ ಏಳು ಬೀಳುಗಳನ್ನು ಕಂಡರೂ, ತಾವು ನಂಬಿಕೊಂಡ ತತ್ವಗಳಿಗೆ ಬದ್ಧವಾಗಿ ಅದೇ ಪರಿವಾರದ ಬಣಗಳಲ್ಲಿ ಉಳಿದವರು. ಪ್ರಸ್ತುತ ಅವರು ಜಾತ್ಯತೀತ ಜನತಾದಳದೊಂದಿಗೆ ಗುರುತಿಸಿಕೊಂಡಿದ್ದಾರೆ.
ದಂಡವತೆ ದಂಪತಿಗಳು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದ ಅಪರೂದ ಜೋಡಿ. ಅವರ ಹೆಂಡತಿ ದಿವಂಗತ ಪರಿಮಳಾ ದಂಡವತೆ ಅವರೂ ರಾಜಕೀಯದಲ್ಲಿ ಸಕ್ರಿಯವಾಗಿದ್ದರು. ಅಲ್ಲದೇ ಮಹಿಳಾ ಸಶಕ್ತೀಕರಣಕ್ಕೆ ಅವರು ನೀಡಿದ ಕೊಡುಗೆ ಅನನ್ಯವಾದುದು. ಅವರು 2002ನೇ ಇಸ್ವಿಯಲ್ಲಿ ಹೃದಯಾಘಾತದಿಂದ ತೀರಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
(ಇನ್ಫೋ ವಾರ್ತೆ)
ಮುಖಪುಟ / ವಾಟ್ಸ್ ಹಾಟ್