ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭೂಹಗರಣ ತನಿಖೆ : ಐಟಿಗೆ ಗುದ್ದು, ಗೌಡರಿಗೆ ಮುದ್ದು!
ಭೂಹಗರಣ
ತನಿಖೆ
:
ಐಟಿಗೆ
ಗುದ್ದು,
ಗೌಡರಿಗೆ
ಮುದ್ದು!
ರಾಜಕೀಯಕ್ಕೆ
ಮತ್ತೊಂದು
ತಿರುವು,
ತನಿಖೆಗೆ
ಎಂ.ಪಿ.ಪ್ರಕಾಶ್
ನೇತೃತ್ವ...
ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಕಂದಾಯ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ನೇತೃತ್ವದಲ್ಲಿ ಉಪಸಮಿತಿಯನ್ನು ರಚಿಸಲಾಗಿದೆ.
ಉಪಸಮಿತಿಯು ಇನ್ಫೋಸಿಸ್ ಸೇರಿದಂತೆ ಇತರೆ ಐಟಿ ಕಂಪನಿಗಳ ಭೂಮಿ ಮಂಜೂರಾತಿ ನಿಯಮಗಳ ಸ್ವರೂಪ, ಹಾಲಿ ಕಾಯ್ದೆಗೆ ತರಬೇಕಾದ ತಿದ್ದುಪಡಿ ಕುರಿತಂತೆ ಚರ್ಚಿಸಿ ಸಲಹೆ ನೀಡಲಿದೆ. ಅಲ್ಲದೆ ಪ್ರಸ್ತುತ ಜಾರಿಯಲ್ಲಿರುವ ಮಾರ್ಗಸೂಚಿಗಳ ಉಲ್ಲಂಘನೆ ಆಗಿದೆಯೇ ಎಂಬ ಬಗ್ಗೆಯೂ ಪರಿಶೀಲನೆ ಮಾಡಲಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇತ್ತೀಚೆಗಷ್ಟೇ ಐಟಿ ಕಂಪನಿಗಳಿಗೆ ಭೂಮಿ ಮಂಜೂರು ಮಾಡುವ ಹೆಸರಿನಲ್ಲಿ, ರೈತರು ಮತ್ತು ಬಡವರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎನ್ನುವ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ತನಿಖಾ ಸಮಿತಿ ರಚಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಐಟಿ - ಬಿಟಿ
Comments
Story first published: Thursday, October 20, 2005, 23:53 [IST]