ರಾಜ್ಯಪಾಲ ಹುದ್ದೆಯಿಂದ ಕೃಷ್ಣ ವಜಾಕ್ಕೆ ಬಿಜೆಪಿ ಪಟ್ಟು
ರಾಜ್ಯಪಾಲ
ಹುದ್ದೆಯಿಂದ
ಕೃಷ್ಣ
ವಜಾಕ್ಕೆ
ಬಿಜೆಪಿ
ಪಟ್ಟು
ಇವು
ಸಮ್ಮಿಶ್ರ
ಸರ್ಕಾರದ
ಕಡೆಯ
ದಿನಗಳು
-ಬಿಜೆಪಿ
ನಾಯಕರ
ಅಭಿಮತ
ಸಮ್ಮಿಶ್ರ ಸರ್ಕಾರ ವೈಫಲ್ಯಗಳನ್ನು ಜನರ ಮುಂದಿಡುವ ಸಂಘರ್ಷ ಯಾತ್ರೆಗೆಂದು ನಗರಕ್ಕೆ ಆಗಮಿಸಿದ್ದ , ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಮತ್ತು ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ.ಕೃಷ್ಣ ಮತ್ತು ಬಿಹಾರ ರಾಜ್ಯಪಾಲ ಬೂಟಾಸಿಂಗ್ ಅವರ ವರ್ತನೆಗಳನ್ನು ತೀಕ್ಷ್ಣವಾಗಿ ಖಂಡಿಸಿರುವ ಬಿಜೆಪಿ ನಾಯಕರು, ರಾಜ್ಯಪಾಲ ಹುದ್ದೆಯಿಂದ ಈ ಇಬ್ಬರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಆಡಳಿತ ಯಂತ್ರ ನಿದ್ದೆ ಮಾಡುತ್ತಿದೆ. ದೇವೇಗೌಡರ ಕಿರುಕುಳದಿಂದ ಧರ್ಮಸಿಂಗ್ ಪೇಚಿಗೆ ಸಿಲುಕಿದ್ದಾರೆ. ಇವು ಸಮ್ಮಿಶ್ರ ಸರ್ಕಾರದ ಕಡೆಯ ದಿನಗಳು ಎಂದು ಅನಂತಕುಮಾರ್ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಜಗದೀಶ ಶೆಟ್ಟರ್, ಸುರೇಶ್ಕುಮಾರ, ಮುಖ್ಯಮಂತ್ರಿಚಂದ್ರು ಮತ್ತಿತರರು ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ