ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಮುಂದೂಡಲ್ಪಟ್ಟ ಬೀದರ್‌ ಸಾಹಿತ್ಯ ಸಮ್ಮೇಳನ

By Staff
|
Google Oneindia Kannada News

ಮತ್ತೆ ಮುಂದೂಡಲ್ಪಟ್ಟ ಬೀದರ್‌ ಸಾಹಿತ್ಯ ಸಮ್ಮೇಳನ
ಜನವರಿ 27ರಿಂದ 29ರವರೆಗೆ ನಡೆಸಲು ತೀರ್ಮಾನ

ಬೆಂಗಳೂರು : ಬೀದರ್‌ನಲ್ಲಿ ನಡೆಯಬೇಕಿದ್ದ 72ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತೆ ಮುಂದೂಡಲ್ಪಟ್ಟಿದ್ದ್ದು, ಮುಂದಿನ ವರ್ಷದ ಜನವರಿ 27ರಿಂದ 29ರವರೆಗೆ ನಡೆಸಲು ತೀರ್ಮಾನಿಸಲಾಗಿದೆ.

ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ನೀಡಿರುವ ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಗುರುಪಾದಪ್ಪ ನಾಗಮಾರಪಳ್ಳಿ, ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಹೇಳಿದರು.

ಈ ಸಮ್ಮೇಳನ ಸತತ ಎರಡನೇ ಬಾರಿಗೆ ಮುಂದೂಡಿಕೆಗೆ ಒಳಗಾಗುತ್ತಿದೆ. ಮೇ 6ರಿಂದ 8ರವರೆಗೆ ನಡೆಯಬೇಕಿದ್ದ ಇದು ಸಿದ್ಧತೆ ಹಾಗೂ ಸರ್ಕಾರಿ ಅನುದಾನದ ಕೊರತೆಯಿಂದ ಮುಂದೂಡಲ್ಪಟ್ಟಿತ್ತು. ಆನಂತರ ಅನುದಾನ ಬಿಡುಗಡೆಯಾದ ಹಿನ್ನೆಲೆಯಲ್ಲಿ ನವೆಂಬರ್‌ 18ರಿಂದ 20ರವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಇದೀಗ ಚುನಾವಣೆಯ ಕಾರಣ ಎದುರಾಗಿದ್ದರಿಂದ ಮತ್ತೆ ಮುಂದೂಡಲ್ಪಟ್ಟಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X