ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಕ್ಷೇತ್ರದ ಕುರಿತು ಹಗುರ ಮಾತು ಸಲ್ಲ : ಎಸ್‌.ಎಂ.ಕೃಷ್ಣ

By Staff
|
Google Oneindia Kannada News

ಐಟಿ ಕ್ಷೇತ್ರದ ಕುರಿತು ಹಗುರ ಮಾತು ಸಲ್ಲ : ಎಸ್‌.ಎಂ.ಕೃಷ್ಣ
ಐಟಿ-ಬಿಟಿ ಕ್ಷೇತ್ರಗಳು ರಾಜ್ಯಕ್ಕೆ ಕೀರ್ತಿ ತಂದಿವೆ, ಬೆಂಬಲಿಸಿದ್ದಕ್ಕೆ ಪಶ್ಚಾತ್ತಾಪವಿಲ್ಲ...

ಬೆಂಗಳೂರು : ಮಾಹಿತಿ ತಂತ್ರಜ್ಞಾನ ಕ್ಷೇತ್ರ ರಾಜ್ಯಕ್ಕೆ ಕೀರ್ತಿ ತಂದ ಉದ್ಯಮವಾಗಿದ್ದು, ಅದರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಮಹಾರಾಷ್ಟ್ರ ರಾಜ್ಯಪಾಲ ಎಸ್‌.ಎಂ.ಕೃಷ್ಣ ಅಭಿಪ್ರಾಯಟ್ಟಿದ್ದಾರೆ.

ಮಂಗಳವಾರ ಅವರು ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ಮಹಾನಾಯಕ ದೇವೇಗೌಡ ಅವರು, ಮುಖ್ಯಮಂತ್ರಿ ಧರ್ಮಸಿಂಗ್‌ ಅವರಿಗೆ ಪತ್ರಬರೆದು ಹಿಂದಿನ ಸರ್ಕಾರ ಐಟಿ ಕ್ಷೇತ್ರಕ್ಕೆ ನೀಡಿದ ಭೂಮಿಯ ಕುರಿತು ತಪಾಸಣೆ ನಡೆಸಬೇಕೆಂದು ಕೇಳಿರುವ ಹಿನ್ನೆಲೆಯಲ್ಲಿ ಕೃಷ್ಣ ಈ ಹೇಳಿಕೆ ನೀಡಿದ್ದಾರೆ.

ಐಟಿ ಕಂಪನಿಗಳಿಗೆ ನೀಡಿದ ಭೂಮಿಗೆ ಸಂಬಂಧಿಸಿದಂತೆ ಏನಾದರೂ ಸಂದೇಹ ಅಥವಾ ತೊಂದರೆಗಳಿದ್ದರೆ, ನಾಗರಿಕ ರೀತಿಯಲ್ಲಿ ಚರ್ಚಿಸೋಣ ಎಂದು ಅವರು ಪರೋಕ್ಷವಾಗಿ ದೇವೇಗೌಡರ ಮೇಲೆ ವಾಗ್ದಾಳಿ ನಡೆಸಿದರು.

ನನ್ನ ಅಧಿಕಾರಾವಧಿಯಲ್ಲಿ ಐಟಿ ಕ್ಷೇತ್ರಕ್ಕೆ ಬೆಂಬಲಿಸಿದ್ದರ ಬಗ್ಗೆ ಪಶ್ಚಾತ್ತಾಪವಿಲ್ಲ. ಐಟಿ ಮತ್ತು ಬಿಟಿ ಕ್ಷೇತ್ರಗಳು ಉತ್ತಮವಾಗಿ ನಡೆಯುತ್ತಿದ್ದು, ಅವು ತೆರಿಗೆ ಕಟ್ಟುತ್ತಿವೆ ಮತ್ತು ವಿದೇಶೀ ವಿನಿಮಯ ಗಳಿಸುತ್ತಿವೆ. ಜನರಿಗೆ ಉದ್ಯೋಗವನ್ನೂ ಒದಗಿಸುತ್ತಿವೆ ಎಂದು ಹೇಳಿದರು.

(ಪಿಟಿಐ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X