ಐಟಿ ಕ್ಷೇತ್ರದ ಕುರಿತು ಹಗುರ ಮಾತು ಸಲ್ಲ : ಎಸ್.ಎಂ.ಕೃಷ್ಣ
ಐಟಿ
ಕ್ಷೇತ್ರದ
ಕುರಿತು
ಹಗುರ
ಮಾತು
ಸಲ್ಲ
:
ಎಸ್.ಎಂ.ಕೃಷ್ಣ
ಐಟಿ-ಬಿಟಿ
ಕ್ಷೇತ್ರಗಳು
ರಾಜ್ಯಕ್ಕೆ
ಕೀರ್ತಿ
ತಂದಿವೆ,
ಬೆಂಬಲಿಸಿದ್ದಕ್ಕೆ
ಪಶ್ಚಾತ್ತಾಪವಿಲ್ಲ...
ಮಂಗಳವಾರ ಅವರು ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಮಹಾನಾಯಕ ದೇವೇಗೌಡ ಅವರು, ಮುಖ್ಯಮಂತ್ರಿ ಧರ್ಮಸಿಂಗ್ ಅವರಿಗೆ ಪತ್ರಬರೆದು ಹಿಂದಿನ ಸರ್ಕಾರ ಐಟಿ ಕ್ಷೇತ್ರಕ್ಕೆ ನೀಡಿದ ಭೂಮಿಯ ಕುರಿತು ತಪಾಸಣೆ ನಡೆಸಬೇಕೆಂದು ಕೇಳಿರುವ ಹಿನ್ನೆಲೆಯಲ್ಲಿ ಕೃಷ್ಣ ಈ ಹೇಳಿಕೆ ನೀಡಿದ್ದಾರೆ.
ಐಟಿ ಕಂಪನಿಗಳಿಗೆ ನೀಡಿದ ಭೂಮಿಗೆ ಸಂಬಂಧಿಸಿದಂತೆ ಏನಾದರೂ ಸಂದೇಹ ಅಥವಾ ತೊಂದರೆಗಳಿದ್ದರೆ, ನಾಗರಿಕ ರೀತಿಯಲ್ಲಿ ಚರ್ಚಿಸೋಣ ಎಂದು ಅವರು ಪರೋಕ್ಷವಾಗಿ ದೇವೇಗೌಡರ ಮೇಲೆ ವಾಗ್ದಾಳಿ ನಡೆಸಿದರು.
ನನ್ನ ಅಧಿಕಾರಾವಧಿಯಲ್ಲಿ ಐಟಿ ಕ್ಷೇತ್ರಕ್ಕೆ ಬೆಂಬಲಿಸಿದ್ದರ ಬಗ್ಗೆ ಪಶ್ಚಾತ್ತಾಪವಿಲ್ಲ. ಐಟಿ ಮತ್ತು ಬಿಟಿ ಕ್ಷೇತ್ರಗಳು ಉತ್ತಮವಾಗಿ ನಡೆಯುತ್ತಿದ್ದು, ಅವು ತೆರಿಗೆ ಕಟ್ಟುತ್ತಿವೆ ಮತ್ತು ವಿದೇಶೀ ವಿನಿಮಯ ಗಳಿಸುತ್ತಿವೆ. ಜನರಿಗೆ ಉದ್ಯೋಗವನ್ನೂ ಒದಗಿಸುತ್ತಿವೆ ಎಂದು ಹೇಳಿದರು.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿ