ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಲಕಾವೇರಿಯಲ್ಲಿ ತೀರ್ಥೋದ್ಭವ, ಭಕ್ತರಿಗೆ ಪುಳಕ

By Staff
|
Google Oneindia Kannada News

ತಲಕಾವೇರಿಯಲ್ಲಿ ತೀರ್ಥೋದ್ಭವ, ಭಕ್ತರಿಗೆ ಪುಳಕ
ದಕ್ಷಿಣ ಕಾಶಿಯಲ್ಲಿ ಭಕ್ತ ಸಮೂಹ, ತಾಯಿ ಕಾವೇರಿಗೆ ಭಕ್ತಿಪೂರ್ವಕ ನಮನ

ತಲಕಾವೇರಿ : ಅದು ಕೊಡಗು ಮಂದಿ ಹರ್ಷಚಿತ್ತದಿಂದ, ಭಕ್ತಿಯ ಭಾವವೇಶದಿಂದ ಪುಳಕಿತರಾದ ಕ್ಷಣ. ಅದು ತಾಯಿ ಕಾವೇರಿಯನ್ನು ಸ್ಪರ್ಶಿಸುವ ಮಂಗಳ ಮೂಹೂರ್ತ.

ಸೋಮವಾರ ರಾತ್ರಿ 8.36ರ ವೃಷಭ ಅಂತ್ಯದ ದ್ರಕ್ಕಣ ಲಗ್ನದಲ್ಲಿ ತೀರ್ಥ ಸ್ವರೂಪದಲ್ಲಿ ತಾಯಿ ಕಾವೇರಿ, ತೀಥೋದ್ಭವದ ಕುಂಡಿಕೆಯಲ್ಲಿ ಪ್ರತ್ಯಕ್ಷಳಾದಳು.

ಚಳಿ ಮಳೆಯನ್ನು ಲೆಕ್ಕಿಸದೇ, ಕಾವೇರಿ ತೀಥೋದ್ಭವಕ್ಕೆ ಸಾಕ್ಷಿಭೂತರಾಗಲು ದಕ್ಷಿಣ ಕಾಶಿ ಎಂದೇ ಗುರ್ತಿಸಲ್ಪಡುವ ಕಾವೇರಿಯ ಉಗಮ ಸ್ಥಳ ಭಾಗಮಂಡಲಕ್ಕೆ ಭಕ್ತ ಸಮೂಹ ಲಗ್ಗೆ ಹಾಕಿತ್ತು. ಮಂಡ್ಯ, ಮೈಸೂರು, ಬೆಂಗಳೂರು ಮಾತ್ರವಲ್ಲದೇ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ನಾನಾ ಭಾಗಗಳಿಂದ ಭಕ್ತಾರು ಆಗಮಿಸಿದ್ದರು. ಕಾವೇರಿಯ ಮಡಿಲಲ್ಲಿ ಸ್ನಾನ ಮಾಡಿ ಪುನೀತರಾದರು. ಕಾವೇರಿಯ ತೀರ್ಥವನ್ನು ಬಾಟಲಿಯಲ್ಲೂ ತುಂಬಿಕೊಂಡರು.

ಈ ಮಂಗಳ ಸಂದರ್ಭದಲ್ಲಿ ಭಾಗಮಂಡಲದಲ್ಲಿನ ತ್ರಿವೇಣಿ ಸಂಗಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಪಾಪ ಸ್ನಾನ ಮತ್ತು ಪುಣ್ಯ ಸ್ನಾನದ ಮೂಲಕ ಧನ್ಯತೆ ಅನುಭವಿಸಿದರು. 120ಕ್ಕೂ ಅಧಿಕ ಕ್ಷೌರಿಕರು ತಮ್ಮ ಕಾಯಕದಲ್ಲಿ ಮಗ್ನರಾಗಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X