ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗತಜ್ಞ ಸಿಜಿಕೆ ಅವರಿಗೆ ಶ್ರೀ ಶಿವಕುಮಾರ ಪ್ರಶಸ್ತಿ

By Staff
|
Google Oneindia Kannada News

ರಂಗತಜ್ಞ ಸಿಜಿಕೆ ಅವರಿಗೆ ಶ್ರೀ ಶಿವಕುಮಾರ ಪ್ರಶಸ್ತಿ
ರಂಗ ಸಂಘಟನೆಗಳ ನೇತಾರನಿಗೆ ನ.9ರಂದು ಸಾಣೇಹಳ್ಳಿಯಲ್ಲಿ ಸನ್ಮಾನ

ಬೆಂಗಳೂರು : ಮೂರು ದಶಕಗಳಿಂದ ರಂಗಭೂಮಿಯ ಸರ್ವತೋಮುಖ ಬೆಳವಣಿಕೆಗೆ ಶ್ರಮಿಸುತ್ತಿರುವ ರಂಗತಜ್ಞ, ಖ್ಯಾತ ನಿರ್ದೇಶಕ ಮತ್ತು ರಂಗಚಳವಳಿಯ ನೇತಾರ ಸಿ.ಜಿ. ಕೃಷ್ಣಸ್ವಾಮಿ(ಸಿಜಿಕೆ) ಅವರಿಗೆ ಶ್ರೀ ಶಿವಕುಮಾರ ಪ್ರಶಸ್ತಿ ಸಂದಿದೆ.

ಸಾಣೇಹಳ್ಳಿ ಪಂಜಿತಾರಾಧ್ಯ ಸ್ವಾಮಿಗಳ ಮುಂದಾಳತ್ವದ ಶ್ರೀ ಶಿವಕುಮಾರ ಕಲಾ ಸಂಘವು, ಲಿಂಗೈಕ್ಯರಾಗಿರುವ ಸಿರಿಗೆರೆ ಶ್ರೀ ಶಿವಕುಮಾರ ಸ್ವಾಮಿಗಳ ಸಂಸ್ಮರಣೆಗಾಗಿ ಸ್ಥಾಪಿಸಿರುವ ಪ್ರಶಸ್ತಿಗೆ ಸಿಜಿಕೆ ಆಯ್ಕೆಗೊಂಡಿದ್ದಾರೆ.

ಈ ಪ್ರಶಸ್ತಿಯು 25ಸಾವಿರ ರೂ. ನಗದು ಮತ್ತು ಗೌರವ ಫಲಕವನ್ನು ಒಳಗೊಂಡಿದೆ. ನವೆಂಬರ್‌ 9ರಂದು ಸಾಣೇಹಳ್ಳಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪ್ರಗತಿಪರ ಚಿಂತನೆ ಬೆಳೆಸುವಲ್ಲಿ, ಯುವ ಪೀಳಿಗೆಯನ್ನು ರಂಗ ಭೂಮಿಯತ್ತ ಆಕರ್ಷಿಸುವಲ್ಲಿ ಸಿಜಿಕೆ ಕಾಣಿಕೆ ಹಿರಿದು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X