‘ಧರ್ಮ’ ಬಿಕ್ಕಟ್ಟು : ಜಾಲಪ್ಪ, ಪರಮೇಶ್ವರ್ ರಾಜೀನಾಮೆ
‘ಧರ್ಮ’
ಬಿಕ್ಕಟ್ಟು
:
ಜಾಲಪ್ಪ,
ಪರಮೇಶ್ವರ್
ರಾಜೀನಾಮೆ
ಸಮ್ಮಿಶ್ರ
ಸರ್ಕಾರದ
ಪಾಲುದಾರ
ಪಕ್ಷಗಳಲ್ಲಿ
ಮುನಿಸು,
ತುಮಕೂರು
ಜಿಲ್ಲೆಯಲ್ಲಿ
ಭಿನ್ನಮತ
ಸ್ಫೋಟ...
ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ತುಮಕೂರು ಜಿಲ್ಲೆಯ ಈ ಕಾಂಗ್ರೆಸ್ ಮುಖಂಡರು, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಗಿರುವುದು ಮುಖಂಡರ ಕೋಪಕ್ಕೆ ಪ್ರಮುಖ ಕಾರಣ.
ಧರ್ಮಸಿಂಗ್ ಅವರ ಧೋರಣೆಯಿಂದ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಿದೆ. ಪಕ್ಷದ ಹೈಕಮಾಂಡ್ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.
ರಾಜೀನಾಮೆ ಪತ್ರಕ್ಕೆ ಮಾಜಿ ಸಂಸದ ಜಿ.ಎಸ್. ಬಸವರಾಜು, ಮಾಜಿ ಶಾಸಕರಾದ ಎಸ್.ಪಿ.ಮುದ್ದಹನುಮೇಗೌಡ, ಷಡಾಕ್ಷರಿ, ಆರ್.ನಾರಾಯಣ, ವೀರಣ್ಣಗೌಡ, ವೆಂಕಟರಮಣಪ್ಪ, ಪಿ.ಎಂ. ರಂಗನಾಥಪ್ಪ, ವೀರಭದ್ರಯ್ಯ, ವಿಧಾನ ಪರಿಷತ್ತಿನ ಸದಸ್ಯ ವಿ.ಎಸ್. ಉಗ್ರಪ್ಪ, ಕೆಪಿಸಿಸಿ ಕಾರ್ಯದರ್ಶಿ ಮತ್ತು ಚಿತ್ರನಟ ಜಗ್ಗೇಶ್ ಸೇರಿದಂತೆ ಹಲವು ಮುಖಂಡರು ಸಹಿ ಹಾಕಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ