ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್‌ 15ರಂದು ಆಟೋ ಚಾಲಕರ ಮುಷ್ಕರ

By Staff
|
Google Oneindia Kannada News

ಅಕ್ಟೋಬರ್‌ 15ರಂದು ಆಟೋ ಚಾಲಕರ ಮುಷ್ಕರ
ನಮಗಾಗುತ್ತಿರುವ ಕಿರುಕುಳ ತಪ್ಪಿಸಿ-ಆಟೋ ಚಾಲಕರ ಸಂಘದ ಒತ್ತಾಯ

ಬೆಂಗಳೂರು : ಆಟೋ ಚಾಲಕರು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಕ್ಟೋಬರ್‌ 15ರಂದು ಮಹಾತ್ಮಾಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಲು ನಿರ್ಧರಿಸಿದ್ದಾರೆ.

ಆಟೋ ಚಾಲಕರ ಸಂಘದ ಅಧ್ಯಕ್ಷ ಎಂ.ಮಂಜುನಾಥ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಆ ಕಾರಣ ಧರಣಿ ನಡೆಸಲು ತೀರ್ಮಾನಿಸಿದ್ದೇವೆ. ಧರಣಿಯ ನಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.

ಆರ್‌ಟಿಓ ಮತ್ತು ಸಂಚಾರಿ ಪೊಲೀಸರು ನೀಡುವ ಕಿರುಕುಳವನ್ನು ತಪ್ಪಿಸುವುದು. ಆಟೋಗಳಿಗೆ ನೋ ಎಂಟ್ರಿ ಎಂಬ ಫಲಕಗಳನ್ನು ಹಾಕಿರುವುದನ್ನು ತೆಗೆಯುವುದು, ಮುಂತಾದ ಬೇಡಿಕೆಗಳನ್ನು ಆಟೋ ಚಾಲಕರು ಮುಂದಿಟ್ಟಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X