ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಐಟಿ ದೊರೆಗಳ ಅಸಡ್ಡೆಗೆ ಡಾ.ಮಹಿಷಿ ವರದಿಯೇ ಉತ್ತರ’

By Staff
|
Google Oneindia Kannada News

‘ಐಟಿ ದೊರೆಗಳ ಅಸಡ್ಡೆಗೆ ಡಾ.ಮಹಿಷಿ ವರದಿಯೇ ಉತ್ತರ’
ಕರ್ನಾಟಕ ಸರ್ಕಾರಗಳು ಬೇಕಿಲ್ಲ, ಕನ್ನಡ ಸರ್ಕಾರಗಳು ಬೇಕು - ಚಂಪಾ

ಬೆಂಗಳೂರು : ಸರ್ಕಾರ ತಕ್ಷಣವೇ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು, ಆ ಮೂಲಕ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ದೊರೆಯುವಂತೆ ಮಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಚಂದ್ರಶೇಖರ ಪಾಟೀಲ ಒತ್ತಾಯಿಸಿದ್ದಾರೆ.

ಶಿರಸಿ ತಾಲ್ಲೂಕು ಕನ್ನಡ ಸಮ್ಮೇಳನ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯದಲ್ಲಿರುವ ಐಟಿ(ಮಾಹಿತಿ ತಂತ್ರಜ್ಞಾನ)ಕಂಪನಿಗಳಿಗೆ, ಕನ್ನಡಿಗರಿಗೆ ಕೆಲಸ ನೀಡುವ ಇಚ್ಛೆ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ , ಕನ್ನಡಿಗರ ಹಿತರಕ್ಷಣೆ ಮಾಡಲು ಡಾ.ಮಹಿಷಿ ವರದಿಯ ಅನುಷ್ಠಾನವೊಂದೇ ಪರ್ಯಾಯ ಮಾರ್ಗ ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಧರ್ಮ ಸಿಂಗ್‌ ಕನ್ನಡದ ಉಳಿವಿಗಾಗಿ ಮುಂದಾಗಬೇಕು ಎಂದು ಕರೆ ನೀಡಿದ ಅವರು, ಇಲ್ಲಿಯವರೆಗೆ ರಾಜ್ಯವನ್ನಾಳಿದ ಸರ್ಕಾರಗಳೆಲ್ಲ ಕರ್ನಾಟಕ ಸರ್ಕಾರಗಳಾಗಿದ್ದವೇ ಹೊರತು, ಕನ್ನಡ ಸರ್ಕಾರಗಳಾಗಿರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X