ರಾಜ್ಯದಿ ಜೆಡಿ(ಯು)ನ ‘ಬಾಣ’ ಮುರಿದ ಚು.ಆಯೋಗ
ರಾಜ್ಯದಿ
ಜೆಡಿ(ಯು)ನ
‘ಬಾಣ’
ಮುರಿದ
ಚು.ಆಯೋಗ
ಚುನಾವಣಾ
ಆಯೋಗಕ್ಕೆ
ಮೇಲ್ಮನವಿ
-ಸೋಮಶೇಖರ್
ಕಳೆದ ಲೋಕಸಭೆ ಮತ್ತು ವಿಧಾನ ಸಭಾ ಚುನಾವಣೆಯಲ್ಲಿ ಸಂಯುಕ್ತ ಜನತಾದಳದ ಕಳಪೆ ಸಾಧನೆಯನ್ನು ಗಮನಿಸಿರುವ ಕೇಂದ್ರ ಚುನಾವಣಾ ಆಯೋಗ ಈ ಪಕ್ಷದ ಮಾನ್ಯತೆಯನ್ನು ರದ್ದುಪಡಿಸಿದೆ. ಆದರೆ ಬಿಹಾರ, ಜಾರ್ಖಂಡ್ ಮತ್ತು ನಾಗಾಲ್ಯಾಂಡ್ಗಳಲ್ಲಿ ಅದರ ಜೆಡಿ-ಯು ಸ್ಥಾನಮಾನಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
ಈ ಬಗ್ಗೆ ಪುನರ್ ಪರಿಶೀಲನೆಗೆ ಮೇಲ್ಮನವಿ ಸಲ್ಲಿಸುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ಸೋಮಶೇಖರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಏನಿದು ರಾಜ್ಯ ಪಕ್ಷದ ಮಾನ್ಯತೆ ? : ಅಧಿಕೃತ ರಾಜ್ಯ ಪಕ್ಷದ ಸ್ಥಾನಮಾನ ಉಳಿಸಿಕೊಳ್ಳಲು, ರಾಜಕೀಯ ಪಕ್ಷಗಳು ಇಬ್ಬರು ಶಾಸಕರು ಮತ್ತು ಒಬ್ಬ ಸಂಸದರನ್ನು ಹೊಂದಿರ ಬೇಕು. ಅಲ್ಲದೇ ಒಟ್ಟು ಮತದಾರರಲ್ಲಿ ಕನಿಷ್ಠ ಶೇ.6ರಷ್ಟು ಮತಗಳನ್ನು ಪಡೆದಿರಬೇಕು.
ರಾಜ್ಯದಲ್ಲಿ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಐದು ಸ್ಥಾನ ಪಡೆದಿದ್ದ ಜೆಡಿ-ಯು, ಲೋಕಸಭೆ ಚುನಾವಣೆಯಲ್ಲಿ ಖಾತೆಯನ್ನೇ ತೆರೆದಿರಲಿಲ್ಲ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು