ಅ.1ರಿಂದ ಕರುನಾಡಲ್ಲಿ ಸಾಂಸ್ಕೃತಿಕ ದಿಬ್ಬಣದ ಮೆರಗು
ಅ.1ರಿಂದ
ಕರುನಾಡಲ್ಲಿ
ಸಾಂಸ್ಕೃತಿಕ
ದಿಬ್ಬಣದ
ಮೆರಗು
ಸುವರ್ಣ
ಕರ್ನಾಟಕದ
ಸಂಭ್ರಮಕ್ಕೆ
ಕನ್ನಡ
ಮತ್ತು
ಸಂಸ್ಕೃತಿ
ಇಲಾಖೆ
ಕೊಡುಗೆ
ಮೂರು ಹಂತದಲ್ಲಿ ದಿಬ್ಬಣ ಆರಂಭಗೊಂಡು ಅ.31ರಂದು ಬೆಂಗಳೂರಿಗೆ ಆಗಮಿಸಿ ಅಂತ್ಯಗೊಳ್ಳಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಎಲ್ಲಾ ಅಕಾಡೆಮಿಗಳ ಸಂಯೋಜನೆಯಲ್ಲಿ ಈ ಸಂಸ್ಕೃತಿ ದಿಬ್ಬಣವನ್ನು ಆಯೋಜಿಸಲಾಗಿದೆ.
ನಾಡಿನ 8ವಿಶಿಷ್ಟ ಕ್ಷೇತ್ರಗಳಾದ ಬಸವ ಕಲ್ಯಾಣ, ಗುಳೇದ ಗುಡ್ಡ, ಮಹಾಲಿಂಗಪುರ, ಬನವಾಸಿ, ಹಂಪಿ, ಕುಂದಾಪುರ, ಬೇಲೂರು ಹಾಗೂ ಭಾಗಮಂಡಲದಲ್ಲಿ 9ದಿನಗಳ ಕಾಲ ದಿಬ್ಬಣ ನಡೆಯಲಿದೆ.
ಅಕ್ಟೋಬರ್ 1ರಿಂದ 9ರವರೆಗೆ ಚಾಮರಾಜನಗರದಲ್ಲಿ ಅಲ್ಲಿಂದ ಅ10ರಿಂದ 18ರವರೆಗೆ ಕಲ್ಬುರ್ಗಿಗೆ ದಿಬ್ಬಣ ಪ್ರವೇಶಿಸಲಿದೆ. ನಂತರ ಕೊಪ್ಪಳ, ಧಾರವಾಡ, ಶಿವಮೊಗ್ಗ, ದಾವಣಗೆರೆ, ದಕ್ಷಿಣ ಕನ್ನಡ, ತುಮಕೂರು, ಮೈಸೂರು ಜಿಲ್ಲೆಗಳಲ್ಲಿ ಸಂಚರಿಸಲಿದೆ.
ಅಕ್ಟೋಬರ್ 19ರಿಂದ 27ರ ವರೆಗೆ ವಿಜಾಪುರ, ರಾಯಚೂರು, ಗದಗ, ಉತ್ತರ ಕನ್ನಡ, ಚಿತ್ರದುರ್ಗ, ಚಿಕ್ಕಮಂಗಳೂರು, ಕೋಲಾರ ಹಾಗೂ ಮಂಡ್ಯದಲ್ಲಿ ಸಂಸ್ಕೃತಿ ದಿಬ್ಬಣ ಸಾಗಲಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು