ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಸಾಲ ಮರುಪಾವತಿ ಅವಧಿ ಡಿ.31ರವರೆಗೆ ವಿಸ್ತರಣೆ

By Staff
|
Google Oneindia Kannada News

ರೈತರ ಸಾಲ ಮರುಪಾವತಿ ಅವಧಿ ಡಿ.31ರವರೆಗೆ ವಿಸ್ತರಣೆ
ನೆರೆ ಪೀಡಿತರ ನೆರವಿಗೆ ಸರ್ಕಾರ ಬದ್ಧ -ಎನ್‌.ಧರ್ಮಸಿಂಗ್‌

ಗುಲ್ಬರ್ಗ : ನೆರೆ ಹಾವಳಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸಹಕಾರಿ ಸಂಘಗಳಿಂದ ಪಡೆದ ಕೃಷಿ ಸಾಲದ ಹಳೆ ಬಾಕಿ ಪಾವತಿಯ ಅವಧಿಯನ್ನು ಸರ್ಕಾರ ಡಿ. 31ರವರೆಗೆ ವಿಸ್ತರಿಸಿದೆ ಎಂದು ಮುಖ್ಯಮಂತ್ರಿ ಧರ್ಮಸಿಂಗ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಏಳು ವರ್ಷಗಳ ಅವಧಿಯ ಹೊಸ ಕೃಷಿ ಸಾಲಕ್ಕೆ ಮೊದಲೆರಡು ವರ್ಷ ಬಡ್ಡಿ ವಿಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ನೆರೆ ಹಾವಳಿಯಿಂದ ಬೆಳಗಾವಿಯಲ್ಲಿ 47ಗ್ರಾಮಗಳು, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ ಮತ್ತಿತರ ಜಿಲ್ಲೆಗಳಲ್ಲಿನ ಗ್ರಾಮಗಳು ಮುಳುಗಡೆಯಾಗಿವೆ. ಪರಿಹಾರ ಕಾರ್ಯ ತ್ವರಿತಗೊಳಿಸಲು ಕೇಂದ್ರದಿಂದ ಹೆಚ್ಚಿನ ಆರ್ಥಿಕ ನೆರವನ್ನು ನಿರೀಕ್ಷಿಸಲಾಗಿದೆ ಎಂದು ಧರ್ಮಸಿಂಗ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X