ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುವಾರದಿಂದ ಪ್ರಥಮ ಕನ್ನಡ ವಿಜ್ಞಾನ ಸಮ್ಮೇಳನ

By Staff
|
Google Oneindia Kannada News

ಗುರುವಾರದಿಂದ ಪ್ರಥಮ ಕನ್ನಡ ವಿಜ್ಞಾನ ಸಮ್ಮೇಳನ
ಸಿ.ಎನ್‌.ಆರ್‌.ರಾವ್‌, ಯು.ಆರ್‌.ರಾವ್‌, ವಿ.ಕೆ. ಅತ್ರೆ, ನಾರಾಯಣಮೂರ್ತಿಗೆ ವಿಶ್ವೇಶ್ವರಯ್ಯ ಪುರಸ್ಕಾರ

ಬೆಂಗಳೂರು : ರಾಷ್ಟ್ರೀಯ ವೈಮಾಂತರಿಕ್ಷಾ ಪ್ರಯೋಗಾಲಯ ಹಾಗೂ ಸ್ವದೇಶಿ ವಿಜ್ಞಾನ ಆಂದೋಲನದಡಿಯಲ್ಲಿ ಸೆಪ್ಟೆಂಬರ್‌ 15ರಿಂದ 17ರವರೆಗೆ ಮೂರು ದಿನಗಳ ಕಾಲ ಪ್ರಪ್ರಥಮ ಕನ್ನಡ ವಿಜ್ಞಾನ ಸಮ್ಮೇಳನ ನಗರದಲ್ಲಿ ನಡೆಯಲಿದೆ.

ನಗರದ ವಿಮಾನ ನಿಲ್ದಾಣ ರಸ್ತೆಯಲ್ಲಿನ ರಾಷ್ಟ್ರೀಯ ವೈಮಾಂತರಿಕ್ಷಾ ಪ್ರಯೋಗಾಲಯದ ಮಲ್ಲಾರಿ ಸಭಾಂಗಣದಲ್ಲಿ ಸೆ. 15ರಂದು ಸಮ್ಮೇಳನಕ್ಕೆ ವಿಜ್ಞಾನ ತಂತ್ರಜ್ಞಾನ ಸಚಿವ ಬಸವರಾಜಹೊರಟ್ಟಿ ಚಾಲನೆ ನೀಡುವರು.

ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ಎಸ್‌.ತಿಮ್ಮಪ್ಪ ಅವರು ಅಧ್ಯಕ್ಷತೆವಹಿಸಲಿದ್ದಾರೆ. ಈ ಸಮ್ಮೇಳನದಲ್ಲಿ ಭೌತ, ರಸಾಯನ, ಎಂಜಿನಿಯರಿಂಗ್‌, ತಂತ್ರಜ್ಞಾನ, ಮನೋ ವಿಜ್ಞಾನ ಕುರಿತಂತೆ ವಿಜ್ಞಾನಿಗಳು ಕನ್ನಡದಲ್ಲಿ ಉಪನ್ಯಾಸ ನೀಡುವರು. ವಿಚಾರಸಂಕಿರಣ ಮತ್ತು ಸಂವಾದಗಳೂ ಉಂಟು.

ಪ್ರಶಸ್ತಿ : ಇದೇ ಸಂದರ್ಭದಲ್ಲಿ ಖ್ಯಾತ ವಿಜ್ಞಾನಿಗಳಾದ ಪ್ರೊ. ಸಿ.ಎನ್‌.ಆರ್‌.ರಾವ್‌, ಡಾ. ಯು.ಆರ್‌.ರಾವ್‌, ಪ್ರೊ.ಆರ್‌. ನರಸಿಂಹ , ಡಾ. ವಿ.ಕೆ. ಅತ್ರೆ, ಡಾ.ಎಸ್‌.ಕೆ. ರಾಮಚಂದ್ರರಾವ್‌ ಹಾಗೂ ಇನ್ಫೋಸಿಸ್‌ನ ನಾರಾಯಣಮೂರ್ತಿ ಅವರಿಗೆ ‘ ಸರ್‌. ಎಂ.ವಿಶ್ವೇಶ್ವರಯ್ಯ ವಿಜ್ಞಾನ ಪುರಸ್ಕಾರ’ವನ್ನು ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನದ ನಿರ್ದೇಶಕರು ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X