ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ-ಬಿಟಿ ಕೊಡುಗೆ ರಾಜ್ಯಕ್ಕೆ ನಗಣ್ಯ-ಪ್ರಕಾಶ್‌ ಕಿಡಿ

By Staff
|
Google Oneindia Kannada News

ಐಟಿ-ಬಿಟಿ ಕೊಡುಗೆ ರಾಜ್ಯಕ್ಕೆ ನಗಣ್ಯ-ಪ್ರಕಾಶ್‌ ಕಿಡಿ
ಕನ್ನಡಿಗರಿಗೆ ಉದ್ಯೋಗ ನೀಡದ ಉದ್ಯಮಗಳಿಗೆ ನೋಟಿಸ್‌ -ಪಿ.ಜಿ.ಆರ್‌.ಸಿಂಧ್ಯ

ಬೆಂಗಳೂರು : ಐಟಿ ಮೇಳಕ್ಕೆ ಬಹಿಷ್ಕಾರ ಹಾಕಿರುವ ಐಟಿ ಕಂಪನಿಗಳ ಧೋರಣೆಯನ್ನು ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್‌ ಟೀಕಿಸಿದ್ದು, ರಾಜ್ಯಕ್ಕೆ ಐಟಿ ಕಂಪನಿಗಳು ನೀಡಿದ ಕೊಡುಗೆಯನ್ನು ಪ್ರಶ್ನಿಸಿದ್ದಾರೆ.

ಸಮಾರಂಭವೊಂದರಲ್ಲಿ ಮಾತನಾಡಿದ ಅವರು ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಸರ್ಕಾರ ಮೂಲಭೂತ ಸೌಲಭ್ಯ ಕಲ್ಪಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಆದರೆ ಐಟಿ ಕಂಪನಿಗಳು ಮೂಲಸೌಕರ್ಯ ಇಲ್ಲವೆಂದು ಬೊಬ್ಬೆ ಹಾಕುತ್ತಿವೆ. ಇಷ್ಟಕ್ಕೂ ಮೂಲ ಸೌಕರ್ಯದ ಪರಿಕಲ್ಪನೆ ಐಟಿ ಕಂಪನಿಗಳಿಗಿದೆಯೇ ಎಂದು ಪ್ರಶ್ನಿಸಿದರು.

ನೆರೆ ಸಂತ್ರಸ್ಥರಿಗೆ ನೆರವು ನೀಡಲು ಬಡ ವರ್ಗವೇ ಮುಂದೆ ಬಂದಿದೆ. ಆದರೆ ಮುಖ್ಯಮಂತ್ರಿಗಳ ಮನವಿಗೆ ಐಟಿ-ಬಿಟಿ ಕಂಪನಿಗಳು ಬಿಡಿಗಾಸಿನ ಕಿಮ್ಮತ್ತು ನೀಡಿಲ್ಲ. ನೆರೆ ಪರಿಹಾರಕ್ಕೆ ಬಿಡಿಗಾಸನ್ನೂ ನೀಡಿಲ್ಲ. ರಾಜ್ಯದಲ್ಲಿ ಸಂಗ್ರಹವಾದ 68ಸಾವಿರ ಕೋಟಿ ತೆರಿಗೆಯಲ್ಲಿ 48ಸಾವಿರ ಕೋಟಿ ಅನ್ಯ ಮೂಲದಿಂದ ಬಂದಿದೆ. ಈ ನಿಟ್ಟಿನಲ್ಲಿ ಐಟಿ-ಬಿಟಿ ಕೊಡುಗೆ ಕಡಿಮೆ ಎಂದರು.

ಬೆಂಗಳೂರಿನಲ್ಲಿ ಎಲ್ಲವರ್ಗದ ಜನರಿದ್ದಾರೆ. ಹೊಟ್ಟೆ ತುಂಬಿದ ಜನರಿಗಿಂತಲೂ ಶ್ರೀಸಾಮಾನ್ಯರ ತೊಂದರೆಗೆ ಸ್ಪಂದಿಸುವುದು ಸರ್ಕಾರದ ಪ್ರಮುಖ ಕರ್ತವ್ಯ ಎಂದು ಎಂ.ಪಿ.ಪ್ರಕಾಶ್‌ ಅಭಿಪ್ರಾಯಪಟ್ಟರು.

ಸಿಂಧ್ಯ ಸಿಟ್ಟು : ಐಟಿ ಉದ್ಯಮವನ್ನು ಮತ್ತೊಂದೆಡೆ ತರಾಟೆಗೆ ತೆಗೆದುಕೊಂಡಿರುವ ಕೈಗಾರಿಕಾ ಸಚಿವ ಪಿ.ಜಿ.ಆರ್‌.ಸಿಂಧ್ಯ, ಕನ್ನಡಿಗರಿಗೆ ಉದ್ಯೋಗಾವಕಾಶಗಳ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.

ಸರೋಜಿನಿ ಮಹಿಷಿ ವರದಿಯನ್ವಯ ಕನ್ನಡಿಗರಿಗೆ ಉದ್ಯೋಗ ನೀಡುವಂತೆ 167ಐಟಿ-ಬಿಟಿ ಉದ್ದಿಮೆಗಳಿಗೆ ಸಿಂಧ್ಯ ನೋಟಿಸ್‌ ಜಾರಿಗೊಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X